masthmagaa.com:
ಕೊರೋನಾ ವೈರಸ್ನಿಂದಾಗಿ ದೇಶದಲ್ಲಿ ಸ್ವಾತಂತ್ರ್ಯ ಬಳಿಕ ಇದೇ ಮೊದಲ ಬಾರಿಗೆ ಅತಿದೊಡ್ಡ ತುರ್ತುಪರಿಸ್ಥಿತಿ ಎದುರಾಗಿದೆ ಅಂತ ಆರ್ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್ ಹೇಳಿದ್ದಾರೆ. 2008-09ರಲ್ಲಿ ಸಂಭವಿಸಿದ್ದ ವಿಶ್ವ ಆರ್ಥಿಕ ಹಿಂಜರಿತಕ್ಕಿಂತ ಇದು ಗಂಭೀರ ಸಮಸ್ಯೆಗಳನ್ನು ಹುಟ್ಟುಹಾಕಲಿದೆ. ಸರ್ಕಾರ ಬಡವರಿಗಾಗಿ ಹೆಚ್ಚು ಖರ್ಚು ಮಾಡಬೇಕು ಮತ್ತು ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಬೇಕು ಅಂತ ಹೇಳಿದ್ದಾರೆ. ಜೊತೆಗೆ ಈ ಪರಿಸ್ಥಿತಿಯನ್ನು ಎದುರಿಸಲು ಕೇಂದ್ರ ಸರ್ಕಾರ ವಿಪಕ್ಷ ನಾಯಕರು ಮತ್ತು ಆರ್ಥಿಕ ತಜ್ಞರ ಸಹಾಯ ಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.
ಚಿಕಾಗೋದ ಬೂತ್ ಸ್ಕೂಲ್ ಆಫ್ ಬ್ಯುಸಿನೆಸ್ನಲ್ಲಿ ಫೈನಾನ್ಸ್ನ ಪ್ರೊಫೆಸರ್ ಆಗಿರುವ ರಘುರಾಮ್ ರಾಜನ್, ಎಲ್ಲವನ್ನೂ ಪ್ರಧಾನಮಂತ್ರಿ ಕಚೇರಿಯಿಂದಲೇ ನಿಯಂತ್ರಣ ಮಾಡೋದ್ರಿಂದ ಹೆಚ್ಚಿನ ಲಾಭ ಆಗೋದಿಲ್ಲ. ಯಾಕಂದ್ರೆ ಈಗಾಗಲೇ ನೌಕರರ ಮೇಲೆ ಕೆಲಸದ ಒತ್ತಡ ಇದೆ. ಇಂಥಾ ಸಮಯದಲ್ಲಿ ಸರ್ಕಾರ ಅನುಭವ ಮತ್ತು ಸಾಮರ್ಥ್ಯ ಇರುವವರನ್ನು ಬಳಸಿಕೊಳ್ಳಬೇಕು ಅಂತ ಹೇಳಿದ್ದಾರೆ.
-masthmagaa.com
Contact Us for Advertisement