masthmagaa.com:
ಬಳ್ಳಾರಿ ಜಿಲ್ಲೆ ವಿಭಜನೆಯಾದ ಬಳಿಕ ಬೆಳಗಾವಿಯನ್ನು 3 ಜಿಲ್ಲೆಯಾಗಿ ವಿಭಜಿಸಬೇಕು ಅಂತ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಬೇಡಿಕೆ ಇಟ್ಟಿದ್ದರು. ಇದೀಗ ಸಾಂಸ್ಕೃತಿಕ ನಗರಿ ಮೈಸೂರು ಜಿಲ್ಲೆಯನ್ನ ಮೈಸೂರು ಮತ್ತು ಹುಣಸೂರು ಜಿಲ್ಲೆಗಳಾಗಿ ವಿಭಜಿಸಬೇಕು ಅಂತ ಹುಣಸೂರು ಕಾಂಗ್ರೆಸ್ ಶಾಸಕ ಹೆಚ್.ಪಿ. ಮಂಜುನಾಥ್ ಆಗ್ರಹಿಸಿದ್ದಾರೆ. ಜೊತೆಗೆ ಹುಣಸೂರಿಗೆ ‘ಡಿ. ದೇವರಾಜ ಅರಸ್ ಜಿಲ್ಲೆ’ ಅಂತ ನಾಮಕರಣ ಮಾಡಬೇಕು ಅಂತ ಹೆಸರನ್ನ ಕೂಡ ಸೂಚಿಸಿದ್ಧಾರೆ. ಬಳ್ಳಾರಿಗೆ ಹೋಲಿಸಿದ್ರೆ ಮೈಸೂರು ದೊಡ್ಡ ಜಿಲ್ಲೆ. ಹೀಗಾಗಿ ಆಡಳಿತಾತ್ಮಕ ದೃಷ್ಟಿಯಿಂದ ಮೈಸೂರು ಜಿಲ್ಲೆಯನ್ನ ವಿಭಜನೆ ಮಾಡಬೇಕು ಅಂತ ಹೆಚ್.ಪಿ. ಮಂಜುನಾಥ್ ಒತ್ತಾಯಿಸಿದ್ದಾರೆ.
-masthmagaa.com
Contact Us for Advertisement