masthmagaa.com:

ಬಳ್ಳಾರಿ ಜಿಲ್ಲೆ ವಿಭಜನೆಯಾದ ಬಳಿಕ ಬೆಳಗಾವಿಯನ್ನು 3 ಜಿಲ್ಲೆಯಾಗಿ ವಿಭಜಿಸಬೇಕು ಅಂತ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಬೇಡಿಕೆ ಇಟ್ಟಿದ್ದರು. ಇದೀಗ ಸಾಂಸ್ಕೃತಿಕ ನಗರಿ ಮೈಸೂರು ಜಿಲ್ಲೆಯನ್ನ ಮೈಸೂರು ಮತ್ತು ಹುಣಸೂರು ಜಿಲ್ಲೆಗಳಾಗಿ ವಿಭಜಿಸಬೇಕು ಅಂತ ಹುಣಸೂರು ಕಾಂಗ್ರೆಸ್​ ಶಾಸಕ ಹೆಚ್​.ಪಿ. ಮಂಜುನಾಥ್ ಆಗ್ರಹಿಸಿದ್ದಾರೆ. ಜೊತೆಗೆ ಹುಣಸೂರಿಗೆ ‘ಡಿ. ದೇವರಾಜ ಅರಸ್​ ಜಿಲ್ಲೆ’ ಅಂತ ನಾಮಕರಣ ಮಾಡಬೇಕು ಅಂತ ಹೆಸರನ್ನ ಕೂಡ ಸೂಚಿಸಿದ್ಧಾರೆ. ಬಳ್ಳಾರಿಗೆ ಹೋಲಿಸಿದ್ರೆ ಮೈಸೂರು ದೊಡ್ಡ ಜಿಲ್ಲೆ. ಹೀಗಾಗಿ ಆಡಳಿತಾತ್ಮಕ ದೃಷ್ಟಿಯಿಂದ ಮೈಸೂರು ಜಿಲ್ಲೆಯನ್ನ ವಿಭಜನೆ ಮಾಡಬೇಕು ಅಂತ ಹೆಚ್​.ಪಿ. ಮಂಜುನಾಥ್ ಒತ್ತಾಯಿಸಿದ್ದಾರೆ.

-masthmagaa.com

Contact Us for Advertisement

Leave a Reply