masthmagaa.com:
ಭಾರತ-ಚೀನಾ ನಡುವೆ ಗಡಿಯಲ್ಲಿ ಸಂಘರ್ಷದ ವಾತಾವರಣ ನಿರ್ಮಾಣವಾಗಿರುವ ನಡುವೆಯೇ ಗಡಿಯಲ್ಲಿ ಆಯುಧ ಪೂಜೆ ನಡೆಸಲು ರಕ್ಷಣಾ ಸಚಿವ ರಾಜ್ನಾಥ್ ಸಿಂಗ್ ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂಗೆ 2 ದಿನ ಪ್ರವಾಸ ಕೈಗೊಂಡಿದ್ದಾರೆ. ಮೊದಲ ದಿನವಾದ ಇಂದು ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ನಲ್ಲಿರುವ ಸುಕ್ನಾ ಯುದ್ಧ ಸ್ಮಾರಕಕ್ಕೆ (Sukna War Memorial) ಭೇಟಿ ನೀಡಿದ ರಕ್ಷಣಾ ಸಚಿವರು ಆಯುಧ ಪೂಜೆ ನೆರವೇರಿಸಿದ್ರು. ಈ ವೇಳೆ ಭೂಸೇನಾ ಮುಖ್ಯಸ್ಥ ಜನರಲ್ ಎಂ.ಎಂ. ನರವನೆ ಕೂಡ ಭಾಗವಹಿಸಿದ್ದರು.
ಬಳಿಕ ಮಾತನಾಡಿದ ರಾಜ್ನಾಥ್ ಸಿಂಗ್, ‘ಭಾರತ-ಚೀನಾ ನಡುವಿನ ಗಡಿ ಬಿಕ್ಕಟ್ಟು ಶಮನವಾಗಲಿ ಮತ್ತು ಶಾಂತಿ ನೆಲಸಲಿ ಅಂತ ಭಾರತ ಬಯಸುತ್ತದೆ. ಅಟ್ ದಿ ಸೇಮ್ ಟೈಂ, ದೇಶದ ಒಂದಿಂಚೂ ಭೂಮಿಯನ್ನೂ ಕೂಡ ನಮ್ಮ ಯೋಧರು ಯಾರಿಗೂ ಬಿಟ್ಟುಕೊಡುವುದಿಲ್ಲ ಎಂಬ ವಿಶ್ವಾಸ ನನಗಿದೆ’ ಅಂತ ಹೇಳಿದ್ದಾರೆ. ನಂತರ ಬಾರ್ಡರ್ ರೋಡ್ಸ್ ಆರ್ಗನೈಸೇಷನ್ (BRO) ನಿರ್ಮಿಸಿರುವ ರಸ್ತೆಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದ್ರು.
-masthmagaa.com
Contact Us for Advertisement