ದೀಪ ಹಚ್ಚಲು ಹೇಳಿದ ಮೋದಿಗೆ ಕುಮಾರಸ್ವಾಮಿ ಸವಾಲು..! ಏನ್ ಗೊತ್ತಾ..?

masthmagaa.com:

ಬೆಂಗಳೂರು: ಇಂದು ರಾತ್ರಿ 9 ಗಂಟೆಗೆ ಎಲ್ಲರೂ ಮನೆಯ ಲೈಟ್​​ಗಳನ್ನು ಆರಿಸಿ, ಬಾಲ್ಕನಿ ಅಥವಾ ಬಾಗಿಲಿಗೆ ಬಂದು ದೀಪ ಅಥವಾ ಫ್ಲ್ಯಾಶ್ ಲೈಟ್ ಮೂಲಕ ಕೊರೋನಾ ವಿರುದ್ಧ ಏಕತೆಯನ್ನು ಪ್ರದರ್ಶಿಸಿ ಎಂದು ಪ್ರಧಾನಿ ಮೋದಿ ಕರೆ ಕೊಟ್ಟಿದ್ದಾರೆ. ಆದ್ರೆ ಈ ಬಗ್ಗೆ ವಿರೋಧ ವ್ಯಕ್ತಪಡಿಸಿರುವ ಜೆಡಿಎಸ್ ನಾಯಕ ಹೆಚ್​​.ಡಿ.ಕುಮಾರಸ್ವಾಮಿ, ಪ್ರಧಾನಿ ಮೋದಿಯವರ 9 ಗಂಟೆಯ ದೀಪದ ಪ್ಲಾನ್ ಮೂಲಕ ಇಡೀ ದೇಶದ ಜನತೆ ಬಿಜೆಪಿಯ ಸಂಸ್ಥಾಪನಾ ದಿನವನ್ನು ಆಚರಿಸುವಂತೆ ಮಾಡ್ತಿದ್ದಾರೆ ಅಂತ ಆರೋಪಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಬಿಜೆಪಿಯ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಪ್ರಧಾನಿ ಮೋದಿಯವರು ದೀಪ ಬೆಳಗುವಂತೆ ಕರೆ ಕೊಟ್ಟಿದ್ದಾರಾ..? ಏಪ್ರಿಲ್ 6ರಂದು ಬಿಜೆಪಿಯ ಸಂಸ್ಥಾಪನಾ ದಿನಾಚರಣೆ ಇದೆ.. ಯಾವುದರ ಆಧಾರದ ಮೇಲೆ ಪ್ರಧಾನಿಯವರು ಈ ದಿನ ಮತ್ತು ಸಮಯವನ್ನು ಫಿಕ್ಸ್ ಮಾಡಿದ್ದಾರೆ.. ವೈಜ್ಞಾನಿಕ ಮತ್ತು ತರ್ಕಬದ್ಧ ವಿವರಣೆಯನ್ನು ನೀಡುವಂತೆ ನಾನು ಪ್ರಧಾನ ಮಂತ್ರಿಗೆ ಸವಾಲು ಹಾಕುತ್ತೇನೆ ಅಂತ ತಿಳಿಸಿದ್ದಾರೆ.

-masthmagaa.com

 

Contact Us for Advertisement

Leave a Reply