masthmagaa.com:

ನೂತನ ಕೃಷಿ ಕಾನೂನುಗಳು ಸರಿ ಇಲ್ಲ ಅಂತ ಹೇಳ್ತಿರೋ ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿಗೆ ಬಿಜೆಪಿ ಒಂದು ಪ್ರಶ್ನೆ ಕೇಳಿದೆ. ಅದೇನಂದ್ರೆ, ‘ರಾಹುಲ್ ಗಾಂಧಿ ಕೇರಳದ ವಯನಾಡು ಸಂಸದ. ಕೇರಳದಲ್ಲಿ ಎಪಿಎಂಸಿ ಕಾಯ್ದೆ ಇದೆಯಾ? ಕೇರಳದಲ್ಲಿ ಇಲ್ಲದಿದ್ದರೆ ರಾಹುಲ್ ಗಾಂಧಿ ಯಾಕೆ ಅಲ್ಲಿನ ರೈತರ ಪರ ನಿಲ್ಲುತ್ತಿಲ್ಲ. ಕೇರಳದಲ್ಲಿ ಚೆನ್ನಾಗಿರುವ ಕಾಯ್ದೆ ದೆಹಲಿಯಲ್ಲೂ ಚೆನ್ನಾಗಿರಬೇಕು ಅಲ್ವಾ? ಹಾಗಿದ್ರೆ ದೆಹಲಿಯಲ್ಲಿ ಈ ಕಾಯ್ದೆಗಳು ಚೆನ್ನಾಗಿಲ್ಲ ಅಂತ ಹೇಗೆ ಹೇಳ್ತೀರ? ರಾಹುಲ್ ಗಾಂಧಿ ಯಾವ ಉದ್ದೇಶ ಇಟ್ಕೊಂಡು ರೈತರ ಪ್ರತಿಭಟನೆಗೆ ಬೆಂಬಲ ಕೊಡ್ತಿದ್ದಾರೆ ಅನ್ನೋದನ್ನ ಅವರು ಸ್ಪಷ್ಟಪಡಿಸಬೇಕು’ ಅಂತ ಬಿಜೆಪಿ ಸಂಸದ ಸುಧಾಂಶು ತ್ರಿವೇದಿ ಹೇಳಿದ್ದಾರೆ. ಇತ್ತೀಚೆಗೆ ಕೇರಳ ಸಿಎಂ ಪಿಣರಾಯಿ ವಿಜಯನ್ ಕೂಡ ರೈತರ ಹೋರಾಟಕ್ಕೆ ನಮ್ಮ ಬೆಂಬಲ ಇದೆ ಅಂತ ಹೇಳಿದ್ರು.

-masthmagaa.com

Contact Us for Advertisement

Leave a Reply