ಜಿಟಿಡಿ ಬಳಿಕ ಮತ್ತೋರ್ವ ಜೆಡಿಎಸ್ ಶಾಸಕನಿಂದ ಮೋದಿಯ ಗುಣಗಾನ..!

ತುಮಕೂರು: ಇಷ್ಟು ದಿನ ಜೆಡಿಎಸ್ ಶಾಸಕ ಜಿ.ಟಿ ದೇವೇಗೌಡ ಪ್ರಧಾನಿ ಮೋದಿಯವರನ್ನು ಹೊಗಳುತ್ತಿದ್ದರು. ಈಗ ಅವರ ಸಾಲಿಗೆ ತುಮಕೂರು ಗ್ರಾಮಾಂತರ ಜೆಡಿಎಸ್ ಶಾಸಕ ಗೌರಿಶಂಕರ್ ಕೂಡ ಸೇರಿದ್ದಾರೆ. ಇವತ್ತು ತುಮಕೂರಿನಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿಯವರ ಬಗ್ಗೆ ಈ ದೇಶದಲ್ಲಿ ಒಳ್ಳೆಯ ಅಭಿಪ್ರಾಯವಿದೆ. ದೇಶದ ಅಭಿವೃದ್ಧಿಯ ಗುರಿ ಇಟ್ಟುಕೊಂಡು ಮುನ್ನಡೆಯುತ್ತಿದ್ದಾರೆ. ದೇಶದ ಬಗೆಗಿನ ಅವರ ಚಿಂತೆ ಒಳ್ಳೆಯದಾಗಿದೆ ಅಂತ ಹಾಡಿ ಹೊಗಳಿದ್ದಾರೆ. ಇದೇ ವೇಳೆ ಮಾಜಿ ಶಾಸಕ ಸುರೇಶ್ ಗೌಡ ಬಗ್ಗೆ ಮಾತನಾಡಿ, ಸುರೇಶ್ ಗೌಡರಂತಹ ಕೆಲ ನಾಯಕರಿಂದ ಬಿಜೆಪಿಗೆ ಕೆಟ್ಟ ಹೆಸರು ಬರುತ್ತಿದೆ. ಜಿಲ್ಲೆಯಲ್ಲಿ ರಸ್ತೆ ಅಭಿವೃದ್ಧಿಗೆ ಬಿಡುಗಡೆಯಾಗಿದ್ದ ಹಣವನ್ನು ಸುರೇಶ್ ಗೌಡ ತಡೆ ಹಿಡಿಯುವಂತೆ ಮಾಡಿದ್ದಾರೆ. ಈ ಬಗ್ಗೆ ಪ್ರಧಾನಿ ಮೋದಿ ಮತ್ತು ಅಮಿತ್ ಶಾಗೆ ಪತ್ರ ಬರೆಯುತ್ತೇನೆ ಎಂದು ಕೆಂಡಕಾರಿದ್ದಾರೆ.

 

Contact Us for Advertisement

Leave a Reply