masthmagaa.com:
ಇತ್ತೀಚೆಗಷ್ಟೇ ಪಾದರಾಯನಪುರ ಪುಂಡರನ್ನು ಸಮರ್ಥಿಸಿಕೊಂಡು ಜಮೀರ್ ಸುದ್ದಿಯಾಗಿದ್ರು. ಇದೀಗ ಮಂಡ್ಯದಲ್ಲಿ ಜೆಡಿಎಸ್ ಎಂಎಲ್ಸಿ ಶ್ರೀಕಂಠೇಗೌಡ ಮತ್ತು ಅವರ ಮಗ ಕೊರೋನಾ ಪರೀಕ್ಷೆಗೆ ಅಡ್ಡಿಪಡಿಸಿದ್ದಾರೆ. ಇಂದು ಅಂಬೇಡ್ಕರ್ ಭವನದಲ್ಲಿ ಪತ್ರಕರ್ತರ ಕೊರೋನಾ ಪರೀಕ್ಷೆ ನಡೆಸಲಾಗ್ತಿತ್ತು. ಇದರ ಪಕ್ಕದಲ್ಲಿ ಜೆಡಿಎಸ್ ಎಂಎಲ್ಸಿ ಶ್ರೀಕಂಠೇಗೌಡರ ಮನೆ ಕೂಡ ಇದೆ. ಅಂಬೇಡ್ಕರ್ ಭವನಕ್ಕೆ ಬಂದ ಶ್ರೀಕಂಠೇಗೌಡರು ಮತ್ತು ಅವರ ಮಗ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಮ್ಮ ಊರಿಗೆ ಕೊರೋನಾ ಹರಡೋಕೆ ಬಂದಿದ್ದೀರಾ ಅಂತ ಕಿರಿಕ್ ಶುರು ಮಾಡಿದ್ದಾರೆ. ಈ ವೇಳೆ ಅಲ್ಲಿದ್ದ ಅಧಿಕಾರಿಗಳು ಮತ್ತು ಪತ್ರಕರ್ತರು ಮನವೊಲಿಸಲು ಮುಂದಾದಾಗ ಶ್ರೀಕಂಠೇಗೌಡರ ಪುತ್ರ ಹಲ್ಲೆಗೆ ಮುಂದಾಗಿದ್ದಾರೆ. ಸದ್ಯ ಶ್ರೀಕಂಠೇಗೌಡರ ಪುತ್ರನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇತ್ತೀಚೆಗಷ್ಟೇ ಆರೋಗ್ಯ ಸಿಬ್ಬಂದಿ ಮತ್ತು ಪೊಲೀಸರ ಮೇಲೆ ಹಲ್ಲೆ ನಡೆಸುವವರ ವಿರುದ್ಧ ಕ್ರಮಕ್ಕೆ ಕೇಂದ್ರ ಸರ್ಕಾರ ಸುಗ್ರೀವಾಜ್ಞೆಯನ್ನೇ ಹೊರಡಿಸಿದೆ. ಇಂಥವರ ವಿರುದ್ಧ 5 ಲಕ್ಷದವರೆಗೆ ದಂಡ ಮತ್ತು 7 ವರ್ಷಗಳವರೆಗೆ ಜೈಲುಶಿಕ್ಷೆ ವಿಧಿಸಲು ಅವಕಾಶ ಇದೆ.
-masthmagaa.com
Contact Us for Advertisement