masthmagaa.com:
ಬೆಂಗಳೂರಿನ ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿ ಮತ್ತು ಕಾವಲ್ ಭೈರಸಂದ್ರದಲ್ಲಿ ನಡೆದ ಗಲಭೆಯು ಕೆಲ ಮತಾಂಧ ಮುಸ್ಲಿಮರು ಮಾಡಿದ ದುಷ್ಕೃತ್ಯ ಅಂತ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ. ಯಾವುದೋ ಒಂದು ಕ್ಷುಲ್ಲಕ ಕಾರಣಕ್ಕೆ ಶಾಸಕರ ಮನೆಗೆ ನುಗ್ಗಿ ಬೆಂಕಿ ಹಚ್ಚಿ, ಕಚೇರಿ ಧ್ವಂಸ ಮಾಡಿ, ಪೊಲೀಸರು ಮತ್ತು ಪತ್ರಕರ್ತರ ಮೇಲೆ ಕಲ್ಲು ತೂರುತ್ತಾರೆ ಅಂದ್ರೆ ನಿಜಕ್ಕೂ ನಾಚಿಕೆಗೇಡಿನ ಸಂಗತಿ. ಕೆಲವು ಮತಾಂಧ ಮುಸ್ಲೀಮರೇ ಇದಕ್ಕೆ ಕಾರಣ. ಎಲ್ಲಾ ಮುಸಲ್ಮಾನರು ಹೀಗೆ ಮಾಡ್ತಾರೆ ಅಂತ ನಾನು ಹೇಳುವುದಿಲ್ಲ. ಉಳಿದ ಮುಸಲ್ಮಾನರು ಈ ಘಟನೆಯನ್ನ ಖಂಡಿಸಬೇಕು. ಇಲ್ಲದಿದ್ರೆ ಇಡೀ ಮುಸಲ್ಮಾನ ಸಮುದಾಯವೇ ತಮ್ಮ ಬೆಂಬಲಕ್ಕೆ ಇದೆ, ಕಾಂಗ್ರೆಸ್ ಪಕ್ಷ ತಮ್ಮ ಬೆಂಬಲಕ್ಕೆ ಇದೆ ಎಂಬ ಮನೋಭಾವನೆ ಕಿಡಿಗೇಡಿಗಳಿಗೆ ಬರುತ್ತದೆ ಎಂದಿದ್ದಾರೆ.
ಇವತ್ತು ಅಖಂಡ ಶ್ರೀನಿವಾಸ ಮೂರ್ತಿ ಅವರ ಮನೆ ಆಗಿದೆ, ನಾಳೆ ಡಿ.ಕೆ. ಶಿವಕುಮಾರ್ ಮನೆ ಆಗಬಹುದು, ನಾಡಿದ್ದು ನನ್ನ ಮನೆ ಕೂಡ ಆಗಬಹುದು. ಹೀಗಾಗಿ ಎಲ್ಲರೂ ಈ ಘಟನೆಯನ್ನು ಪಕ್ಷಾತೀತವಾಗಿ ಖಂಡಿಸಬೇಕು. ಹೀಗೆ ಮಾಡಿದವರು ದೇಶದ್ರೋಹಿಗಳು. ಇವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ನಮ್ಮ ಹಿಂದೆ ಕಾಂಗ್ರೆಸ್ ಇದೆ, ಡಿ.ಕೆ. ಶಿವಕುಮಾರ್ ಇದ್ದಾರೆ ಎಂಬ ಮನೋಭಾವನೆಯಿಂದ ಅವರಿಗೆ ಸೊಕ್ಕಿದೆ. ಈ ಸೊಕ್ಕನ್ನು ಮುರಿಯಲು ತಯಾರಿದ್ದೇವೆ ಅಂತ ಎಲ್ಲಾ ಪಕ್ಷದ ಮುಖಂಡರು ಹೇಳಬೇಕು. ಆಗ ಮಾತ್ರ ಅವರಿಗೆ ನಾವು ಕೂಡ ಸಮಾಜದ ಆಸ್ತಿ ಎಂಬ ಭಾವನೆ ಬರುತ್ತದೆ ಅಂತ ಈಶ್ವರಪ್ಪ ಹೇಳಿದ್ದಾರೆ.
ಪತ್ರಕರ್ತರು ಏನು ತಪ್ಪು ಮಾಡಿದ್ದರು..? ರಕ್ಷಣೆಗೆ ಬಂದಿದ್ದ ಪೊಲೀಸರನ್ನು ಯಾಕೆ ಹೊಡೆಯುತ್ತಾರೆ..? ಯಾರೋ ಒಬ್ಬ ಮಾಡಿದ ತಪ್ಪಿಗೆ ಶಾಸಕರ ಮನೆಗೆ ನುಗ್ಗಿ ಬೆಂಕಿ ಹಚ್ಚಿರೋದು ಖಂಡನೀಯ. ಅವರಿಗೆ ಸಪೋರ್ಟ್ ಮಾಡಲು ರಾಜಕೀಯ ಪಕ್ಷ ಇದೆ ಅನ್ನೋ ಕಾರಣದಿಂದ ಈ ರೀತಿಯ ದುಷ್ಕೃತ್ಯಕ್ಕೆ ಕೈ ಹಾಕುತ್ತಾರೆ. ದೇಶದಲ್ಲಿ ಉಗ್ರಗಾಮಿಗಳನ್ನೇ ಮಟ್ಟ ಹಾಕಲಾಗಿದೆ. ಇವರೆಲ್ಲಾ ಚಿಲ್ಲರೆಗಳು. ಇವರನ್ನು ಮಟ್ಟಹಾಕುವುದು ದೊಡ್ಡ ವಿಚಾರವಲ್ಲ. ಹೇಗೆ ಮಟ್ಟ ಹಾಕಬೇಕು ಅನ್ನೋದು ರಾಜ್ಯ ಸರ್ಕಾರಕ್ಕೆ ಗೊತ್ತಿದೆ ಎಂದಿದ್ದಾರೆ.
-masthmagaa.com
Contact Us for Advertisement