masthmagaa.com:
ಬೆಂಗಳೂರಿನಲ್ಲಿ ಜಾರಿಗೆ ತಂದಿರುವ ಒಂದು ವಾರದ ಲಾಕ್ಡೌನ್ ಅನ್ನು ಮುಂದುವರಿಸುವ ಯಾವುದೇ ಯೋಜನೆ ಸರ್ಕಾರದ ಮುಂದಿಲ್ಲ ಅಂತ ಸಿಎಂ ಬಿ.ಎಸ್. ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ. ಬೆಂಗಳೂರಿನ 8 ವಲಯಗಳ ಉಸ್ತುವಾರಿ ಸಚಿವರ ಜೊತೆ ಇವತ್ತು ಸಭೆ ನಡೆಸಿದ ಬಿಎಸ್ವೈ, ಕೊರೋನಾ ನಿಯಂತ್ರಣಕ್ಕೆ ಲಾಕ್ಡೌನ್ ಪರಿಹಾರವಲ್ಲ ಅಂತ ಹೇಳಿದ್ದಾರೆ.
ಸಭೆ ಬಳಿಕ ಮಾತನಾಡಿದ ಕಂದಾಯ ಸಚಿವ ಆರ್. ಅಶೋಕ್ ಕೂಡ ಇದೇ ಮಾತನ್ನು ಹೇಳಿದ್ರು. ಬೆಂಗಳೂರಿನಲ್ಲಿ ಲಾಕ್ಡೌನ್ ಅನ್ನು ಯಾವುದೇ ಕಾರಣಕ್ಕೂ ಮುಂದುವರಿಸೋದಿಲ್ಲ ಅಂದ್ರು. ಇದರೊಂದಿಗೆ ಬೆಂಗಳೂರಿನಲ್ಲಿ ಎರಡು ವಾರ ಲಾಕ್ಡೌನ್ ಮುಂದುವರಿಯುತ್ತೆ, ಮೂರು ವಾರ ಲಾಕ್ಡೌನ್ ಮುಂದುವರಿಯುತ್ತೆ ಅನ್ನೋ ವದಂತಿಗಳಿಗೆ ತೆರೆ ಎಳೆದಿದ್ದಾರೆ.
ಇದನ್ನೂ ಓದಿ: ಒಂದು ಇಂಚು ಭೂಮಿಯನ್ನು ಕಿತ್ತುಕೊಳ್ಳಲಾಗುವುದಿಲ್ಲ: ಚೀನಾಗೆ ಸಿಂಗ್ ವಾರ್ನಿಂಗ್
ಬೆಂಗಳೂರಿನಲ್ಲಿ ಕೊರೋನಾ ಹಾವಳಿಯನ್ನ ನಿಯಂತ್ರಿಸಲು ಮತ್ತಷ್ಟು ವಾರಗಳ ಕಾಲ ಲಾಕ್ಡೌನ್ ವಿಸ್ತರಿಸಬೇಕು ಅನ್ನೋ ಕೂಗು ಕೇಳಿ ಬಂದಿತ್ತು. ಸ್ವತಃ ಬಿಬಿಎಂಪಿ ಮೇಯರ್ ಗೌತಮ್ ಕುಮಾರ್ ಕೂಡ ಲಾಕ್ಡೌನ್ ವಿಸ್ತರಿಸಬೇಕು ಅಂತ ಮನವಿ ಮಾಡಿದ್ದರು. ಆದ್ರೀಗ ಬೆಂಗಳೂರಿನ ಲಾಕ್ಡೌನ್ ಕೇವಲ ಒಂದು ವಾರಕ್ಕೆ ಸೀಮಿತ ಅಂತ ಸರ್ಕಾರ ಸ್ಪಷ್ಟಪಡಿಸಿದೆ.
ಬೆಂಗಳೂರಿಲ್ಲಿ ಕೊರೋನಾ ವೈರಸ್ ವೇಗವಾಗಿ ಹರಡುತ್ತಿದೆ. ಪ್ರತಿದಿನವೂ ಹೊಸ ಹೊಸ ದಾಖಲೆ ಬರೀತಿದೆ. ಕಳೆದ ಎರಡ್ಮೂರು ದಿನಗಳಿಂದ ಪ್ರತಿದಿನ 50ಕ್ಕೂ ಹೆಚ್ಚು ಸೋಂಕಿತರು ಪ್ರಾಣ ಕಳೆದುಕೊಂಡಿದ್ದಾರೆ.
ಬೆಂಗಳೂರು ಕೊರೋನಾ ಚಿತ್ರಣ:
ಒಟ್ಟು ಪ್ರಕರಣ: 25,288
ಮೃತಪಟ್ಟವರು: 507
ಗುಣಮುಖ: 5,952
ಸಕ್ರಿಯ ಪ್ರಕರಣ: 18,828
-masthmagaa.com
Contact Us for Advertisement