ಕುತ್ತಿಗೆ ಇರಿದು ಹಿಂದೂ ಮಹಾಸಭಾ ನಾಯಕನ ಬರ್ಬರ ಹತ್ಯೆ

ಉತ್ತರ ಪ್ರದೇಶ: ಹಿಂದೂ ಸಮಾಜ ಪಕ್ಷದ ನಾಯಕ ಕಮಲೇಶ್ ತಿವಾರಿಯವರನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾರೆ. ಉತ್ತರ ಪ್ರದೇಶದ ಲಕ್ನೋದಲ್ಲಿ ಈ ಘಟನೆ ನಡೆದಿದೆ.

ಕಮಲೇಶ್ ಕಚೇರಿಯಲ್ಲಿದ್ದ ವೇಳೆ ನುಗ್ಗಿದ ದುಷ್ಟರು ಚಾಕುವಿನಿಂದ ಕುತ್ತಿಗೆಗೆ ಇರಿದಿದ್ದಾರೆ. ನಂತರ ಸ್ಥಳದಿಂದ ಓಡಿಹೋಗಿದ್ದಾರೆ. ಕಮಲೇಶ್ ತಿವಾರಿಯವರನ್ನು ತಕ್ಷಣವೇ ಆಸ್ಪತ್ರೆಗೆ ಸೇರಿಸಿದ್ರು ಯಾವುದೇ ಪ್ರಯೋಜನ ಆಗಲಿಲ್ಲ. ಮೊಬೈಲ್ ಲೊಕೇಶನ್ ಜಾಲಾಡುತ್ತಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಘಟನಾ ಸ್ಥಳದಲ್ಲಿ ಗುಂಡುಗಳು ಸಹ ಪತ್ತೆಯಾಗಿದೆ.

ಹಿಂದೂ ಮಹಾಸಭಾದ ನಾಯಕರಾಗಿರುವ ಇವರು 2015ರಲ್ಲಿ ಪೈಗಂಬರ್ ವಿರುದ್ಧ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದರು. ಈ ವಿಚಾರದಲ್ಲಿ ಬಂಧನಕ್ಕೂ ಒಳಗಾಗಿದ್ದ ಕಮಲೇಶ್ ತಿವಾರಿ, ಜಾಮೀನಿನ ಮೇಲೆ ಹೊರಬಂದಿದ್ದರು.

Contact Us for Advertisement

Leave a Reply