masthmagaa.com:
ಲವ್ ಜಿಹಾದ್ ಕಾನೂನು ಬಗ್ಗೆ ದೇಶಾದ್ಯಂತ ಚರ್ಚೆ ನಡೆಯುತ್ತಿರುವಾಗಲೇ ಕರ್ನಾಟಕ ಹೈಕೋರ್ಟ್ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಮಹತ್ವದ ತೀರ್ಪು ನೀಡಿದೆ. ‘ಯಾವುದೇ ಗಂಡು ಅಥವಾ ಹೆಣ್ಣು ತಮಗಿಷ್ಟ ಬಂದವರನ್ನ ಮದುವೆಯಾಗಲು ಸಂವಿಧಾನವೇ ಮೂಲಭೂತ ಹಕ್ಕು ನೀಡಿದೆ. ಅದನ್ನ ಜಾತಿ ಅಥವಾ ಧರ್ಮದ ಆಧಾರದಲ್ಲಿ ಕಸಿದುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ’ ಅಂತ ಹೈಕೋರ್ಟ್ ಹೇಳಿದೆ. ಈ ಹಿಂದೆ ಅಲಹಾಬಾದ್ ಮತ್ತು ದೆಹಲಿ ಹೈಕೋರ್ಟ್ಗಳು ಕೂಡ ಇಂತಹದ್ದೇ ತೀರ್ಪು ನೀಡಿದ್ದವು.
ಅಂದ್ಹಾಗೆ ಬೆಂಗಳೂರಿನ ಸಾಫ್ಟ್ವೇರ್ ಇಂಜಿನಿಯರ್ ವಜೀದ್ ಖಾನ್ ಮತ್ತು ಆತನ ಸಹೋದ್ಯೋಗಿ ರಮ್ಯಾ ಎಂಬುವವರು ಮದುವೆಯಾಗಲು ಮುಂದಾಗಿದ್ದಾರೆ. ಇದಕ್ಕೆ ವಜೀದ್ರ ತಾಯಿ ಶ್ರೀಲಕ್ಷ್ಮೀ ನಮಗೇನು ಅಭ್ಯಂತರವಿಲ್ಲ ಅಂತ ಹೇಳಿದ್ದಾರೆ. ಆದ್ರೆ ರಮ್ಯಾ ಪೋಷಕರಾದ ಗಂಗಾಧರ್ ಮತ್ತು ಗಿರಿಜಾ ಈ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಕೋರ್ಟ್ ಮೆಟ್ಟಿಲೇರಿದ್ದ ವಜೀದ್ ಖಾನ್, ರಮ್ಯಾಗೆ ತನಗಿಷ್ಟ ಬಂದವರನ್ನ ಮದುವೆಯಾಗುವ ಸ್ವಾತಂತ್ರ್ಯವನ್ನ ನೀಡಬೇಕು ಅಂತ ಮನವಿ ಮಾಡಿದ್ದ. ಈ ಸಂಬಂಧ ವಿಚಾರಣೆ ನಡೆಸಿದ ಕೋರ್ಟ್ ಈ ತೀರ್ಪು ನೀಡಿದೆ. ಜೊತೆಗೆ ಸಾಫ್ಟ್ವೇರ್ ಇಂಜಿನಿಯರ್ ಆಗಿರುವ ರಮ್ಯಾಗೆ ತನ್ನ ಜೀವನದ ಬಗ್ಗೆ ನಿರ್ಧಾರ ಕೈಗೊಳ್ಳುವ ಅಧಿಕಾರವಿದೆ ಹೇಳಿದೆ. ಈ ಪ್ರಕರಣದಲ್ಲಿ ಯಾರು ಯಾರನ್ನೂ ಮತಾಂತರ ಮಾಡಿಲ್ಲ. ಜೊತೆಗೆ ಅಂತರ್ ಜಾತಿ ಮತ್ತು ಅಂತರ್ ಧರ್ಮೀಯ ಮದುವೆಗೆ ಸಂಬಂಧಿಸಿದಂತೆ ಜನರಲ್ಲಿರುವ ಗೊಂದಲವನ್ನ ಈ ತೀರ್ಪು ಬಗೆಹರಿಸಿದಂತಿದೆ.
-masthmagaa.com
Contact Us for Advertisement