masthmagaa.com:
‘ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ದಂಗೆ ಇಲ್ಲ. ದಂಗೆ ಅಂದ್ರೆ ಅಲ್ಲಿ ನಾಯಕನ ಬದಲಾವಣೆ ಆಗೋದು. ಆದ್ರೆ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಲ್ಲಿ ಯಾವುದೇ ಬದಲಾವಣೆ ಇಲ್ಲ’ ಅಂತ ಕಾಂಗ್ರೆಸ್ ಹಿರಿಯ ನಾಯಕ ಗುಲಾಂ ನಬಿ ಆಜಾದ್ ಹೇಳಿದ್ದಾರೆ. ಕಪಿಲ್ ಸಿಬಲ್ ಸೇರಿದಂತೆ ಹಲವು ನಾಯಕರ ಅಸಮಾಧಾನ ಬಗ್ಗೆ ಮಾತನಾಡಿದ ಅವರು, ‘ಇದೆಲ್ಲಾ ಪಕ್ಷದಲ್ಲಿನ ಕೆಲವೊಂದು ಸುಧಾರಣೆಗಾಗಿ, ಅಭಿವೃದ್ಧಿಗಾಗಿ ನಿರ್ದೇಶಿಸುವುದು’ ಅಂತ ಹೇಳಿದ್ದಾರೆ.
‘ಬಿಹಾರ ಚುನಾವಣೆಯಲ್ಲಿ ಹೀನಾಯವಾಗಿ ಸೋಲುಂಡಿರುವುದು ನಾಯಕತ್ವದ ದೋಷಗಳಿಂದಲ್ಲ. ಪಕ್ಷದ ಒಳಿತಿಗಾಗಿ ಕೆಲಸ ಮಾಡುವ ಹುಮ್ಮಸ್ಸು ನಮ್ಮಲ್ಲಿರಬೇಕು. ನಮ್ಮಲ್ಲಿ ಕೆಲವರು ಫೈವ್ ಸ್ಟಾರ್ ಸಂಪ್ರದಾಯ ಬೆಳೆಸಿಕೊಂಡಿದ್ದಾರೆ. ಸುಸಜ್ಜಿತ ವ್ಯವಸ್ಥೆ ಇರುವ ಕಡೆ ಅಷ್ಟೇ ಅವರು ಕಾಲಿಡುತ್ತಾರೆಯೇ ಹೊರತು ಮಣ್ಣಿನ ರಸ್ತೆಗಳಿಗಲ್ಲ. ಇದೇ ನಮ್ಮ ಸೋಲಿಗೆ ಕಾರಣ. ಇದನ್ನ ಹೋಗಲಾಡಿಸಲು ಪಕ್ಷದಲ್ಲಿ ಸ್ವಲ್ಪ ಬದಲಾವಣೆ ಆಗಬೇಕಿದೆ’ ಅಂತ ಗುಲಾಂನಬಿ ಆಜಾದ್ ಹೇಳಿದ್ದಾರೆ.
-masthmagaa.com
Contact Us for Advertisement