masthmagaa.com:
ತೆಲಂಗಾಣ: ಕೆ.ಸಿ ಚಂದ್ರಶೇಖರ್ ರಾವ್ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡ್ತಾರೆ.. ಅವರ ಜಾಗಕ್ಕೆ ಅವರ ಮಗ ಕೆಟಿ ರಾಮರಾವ್ ಮುಖ್ಯಮಂತ್ರಿಯಾಗುತ್ತಾರೆ ಅನ್ನೋ ಸುದ್ದಿಗಳು ಹರಿದಾಡ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕೆ.ಸಿ ಚಂದ್ರಶೇಖರ್ ರಾವ್, ನಾನು ಆರಾಮಾಗಿದ್ದೀನಿ. ಮುಂದಿನ 10 ವರ್ಷಗಳವರೆಗೂ ಸಿಎಂ ಆಗಿ ಮುಂದುವರಿಯುತ್ತೇನೆ ಅಂತ ಹೇಳಿದ್ದಾರೆ. ಜೊತೆಗೆ ಚೇಂಜ್ ಮಾಡೋದಾದ್ರೂ ಕೂಡ ನಾನು ಎಲ್ಲಾ ಶಾಸಕರು ಮತ್ತು ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ನಿರ್ಧಾರ ಮಾಡ್ತೀನಿ. ನಿಮಗೆ ಹೇಳದೇ ಏನೂ ಮಾಡೋದಿಲ್ಲ.. ಆದ್ರೆ ಕೆಲವರು ಪಕ್ಷದ ಶಿಸ್ತುಮೀರಿ ಸಿಎಂ ಬದಲಾವಣೆ ಬಗ್ಗೆ ಬಾಯಿಗೆ ಬಂದಂತೆ ಹೇಳಿಕೆಗಳನ್ನು ನೀಡ್ತಿದ್ದಾರೆ. ನಾನು ಯಾರನ್ನೂ ಬಿಡೋದಿಲ್ಲ.. ಇಂಥಾ ಹೇಳಿಕೆಗಳನ್ನು ನೀಡಿದ್ರೆ ಅಂತಹ ನಾಯಕರನ್ನು ಪಕ್ಷದಿಂದಲೇ ಒದ್ದು ಹೊರಹಾಕ್ತೀನಿ ಅಂತ ಹೇಳಿದ್ದಾರೆ.
-masthmagaa.com
Contact Us for Advertisement