masthmagaa.com:
‘ಚೀನಾ ದೇಶವು ತೈವಾನ್, ವಿಯೆಟ್ನಾಂ, ಅಮೆರಿಕ, ಜಪಾನ್ ಮತ್ತು ಭಾರತದೊಂದಿಗೆ ಕಾಲು ಕೆರೆದು ಜಗಳಕ್ಕೆ ಬಂತು. ಆದ್ರೆ ಭಾರತದ ತಿರುಗೇಟಿಗೆ ಚೀನಾ ಶಾಕ್’ ಆಗಿದೆ ಅಂತ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. ಮುಂದುವರೆದು ಮಾತನಾಡಿದ ಅವರು, ‘ನಮ್ಮ ಗಡಿಗಳಲ್ಲಿ ಚೀನಾ ಹೇಗೆ ಒಳನುಗ್ಗಿದೆ ಮತ್ತು ಇನ್ನೂ ಒಳನುಗ್ಗಲು ಪ್ರಯತ್ನಿಸುತ್ತಿದೆ ಅನ್ನೋದು ಇಡೀ ಜಗತ್ತಿಗೆ ಸ್ಪಷ್ಟವಾಗಿದೆ. ಚೀನಾದ ವಿಸ್ತರಣಾವಾದಿ ವರ್ತನೆ ಬಗ್ಗೆ ಪ್ರತಿಯೊಬ್ಬರಿಗೂ ಗೊತ್ತಿದೆ. ಆದ್ರೆ ಭಾರತೀಯ ಸೇನೆ ಮತ್ತು ದೇಶದ ಜನ ದೃಢವಾಗಿ ನಿಂತು ತಮ್ಮ ಶೌರ್ಯವನ್ನು ಪ್ರದರ್ಶಿಸಿದ್ರು. ಇದರಿಂದ ಚೀನಾಗೆ ಊಹಿಸಲಾಗದಷ್ಟು ಮಟ್ಟದಲ್ಲಿ ಸಾಮಾಜಿಕ ಮತ್ತು ಆರ್ಥಿಕವಾಗಿ ಪೆಟ್ಟು ಬಿದ್ದಿದೆ. ಚೀನಾ ಇದಕ್ಕೆ ಯಾವ ರೀತಿ ಪ್ರತಿಕ್ರಿಯೆ ನೀಡುತ್ತೆ ಅನ್ನೋದು ನಮಗೆ ಗೊತ್ತಿಲ್ಲ. ಹೀಗಾಗಿ ನಾವು ತುಂಬಾ ಎಚ್ಚರದಿಂದ ಇರೋದು ಅಗತ್ಯ’ ಅಂತ ಮೋಹನ್ ಭಾಗವತ್ ಹೇಳಿದ್ದಾರೆ.
ಮೋಹನ್ ಭಾಗವತ್ ಈ ರೀತಿ ಹೇಳಿದ ಬೆನ್ನಲ್ಲೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡಿ ‘ಮೋಹನ್ ಭಾಗವತ್ ಅವರಿಗೆ ನಿಜ ಏನು ಅನ್ನೋದು ಗೊತ್ತಿದೆ. ಸತ್ಯ ಹೇಳಲು ಅವರು ಹೆದರುತ್ತಾರೆ. ನಿಜ ಏನು ಅಂದ್ರೆ ಚೀನಾ ನಮ್ಮ ನೆಲವನ್ನು ವಶಪಡಿಸಿಕೊಂಡಿದೆ. ಕೇಂದ್ರ ಸರ್ಕಾರ ಮತ್ತು ಆರ್ಎಸ್ಎಸ್ ಅದಕ್ಕೆ ಅವಕಾಶ ಕೊಟ್ಟಿದೆ’ ಅಂತ ಹೇಳಿದ್ದಾರೆ.
-masthmagaa.com
Contact Us for Advertisement