‘ರಾಜಕೀಯಕ್ಕೆ ಬರಲ್ಲ’ ಎಂದ ರಜಿನಿಕಾಂತ್​.. ‘ದಯವಿಟ್ಟು ನನ್ನನ್ನ ಕ್ಷಮಿಸಿ’

masthmagaa.com:

ತಮಿಳುನಾಡು ರಾಜಕಾರಣಕ್ಕೆ ಎಂಟ್ರಿ ಕೊಡಲು ಸಿದ್ಧತೆ ನಡೆಸಿದ್ದ ಸೂಪರ್ ಸ್ಟಾರ್ ರಜಿನಿಕಾಂತ್ ಯುಟರ್ನ್ ಹೊಡೆದಿದ್ದಾರೆ. ರಾಜಕೀಯಕ್ಕೆ ಬರಲ್ಲ ಅಂತ ಮೂರು ಪುಟಗಳ ಪ್ರಕಟಣೆಯನ್ನ ಹೊರಡಿಸಿದ್ದಾರೆ. ಇದರಲ್ಲಿ, ‘ಚುನಾವಣಾ ರಾಜಕೀಯಕ್ಕೆ ಪ್ರವೇಶಿಸದೇ ಜನರ ಸೇವೆ ಸಲ್ಲಿಸುತ್ತೇನೆ. ನನ್ನ ಈ ನಿರ್ಧಾರ ಅಭಿಮಾನಿಗಳಿಗೆ ಮತ್ತು ಜನರಿಗೆ ನಿರಾಶೆ ತರಿಸಬಹುದು. ದಯವಿಟ್ಟು ನನ್ನನ್ನ ಕ್ಷಮಿಸಿ. ಈ ನಿರ್ಧಾರವನ್ನ ಘೋಷಿಸುವಾಗ ಎಷ್ಟು ನೋವಾಗಿದೆ ಅನ್ನೋದು ನನಗೆ ಮಾತ್ರ ಗೊತ್ತಿದೆ’ ಅಂತ ರಜಿನಿಕಾಂತ್ ಹೇಳಿದ್ದಾರೆ. ರಕ್ತದೊತ್ತಡದಲ್ಲಿ (BP) ಏರುಪೇರಾದ ಹಿನ್ನೆಲೆ ಇತ್ತೀಚೆಗಷ್ಟೇ ಹೈದ್ರಾಬಾದ್​ನ ಆಸ್ಪತ್ರೆಗೆ ರಜಿನಿ ಅಡ್ಮಿಟ್ ಆಗಿದ್ದರು. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಎರಡೇ ದಿನದಲ್ಲಿ ಈ ನಿರ್ಧಾರವನ್ನ ಪ್ರಕಟಿಸಿದ್ದಾರೆ. ಅಂದ್ಹಾಗೆ ಡಿಸೆಂಬರ್ 31ರಂದು ತಮ್ಮ ರಾಜಕೀಯ ಪಕ್ಷದ ಬಗ್ಗೆ ಘೋಷಣೆ ಮಾಡೋದಾಗಿ ರಜಿನಿಕಾಂತ್ ಈ ಹಿಂದೆ ಹೇಳಿದ್ದರು. ಈಗ ಅದಕ್ಕೂ ಮೊದಲೇ ಚುನವಣಾ ರಾಜಕೀಯಕ್ಕೆ ಬರಲ್ಲ ಅಂತ ಹೇಳಿದ್ಧಾರೆ. ರಾಜಕೀಯಕ್ಕೆ ಎಂಟ್ರಿ ಕೊಡದಿರಲು ಆರೋಗ್ಯ ಸಮಸ್ಯೆಯೇ ಪ್ರಮುಖ ಕಾರಣ ಅಂತಾನೂ ಹೇಳಲಾಗ್ತಿದೆ.

-masthmagaa.com

Contact Us for Advertisement

Leave a Reply