ಟಿಆರ್​​​ಪಿ ಹಗರಣ ಸಂಬಂಧ ರಿಪಬ್ಲಿಕ್ ಟಿವಿ ಸಿಇಒ ಅರೆಸ್ಟ್​​​..!

masthmagaa.com:

ಮುಂಬೈ: ಟಿಆರ್​​ಪಿ ಹಗರಣ ಸಂಬಂಧ ರಿಪಬ್ಲಿಕ್ ಟಿವಿ ಸಿಇಒ ವಿಕಾಸ್ ಕಾಂಚನ್​​ದಾನಿಯನ್ನು ಮುಂಬೈ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಈ ಮೂಲಕ ಈ ಪ್ರಕರಣದಲ್ಲಿ 13 ಮಂದಿ ಬಂಧನಕ್ಕೆ ಒಳಗಾದಂತಾಗಿದೆ. ಮುಂಬೈ ಪೊಲೀಸರು ಅಕ್ಟೋಬರ್ 9ರಂದು ಎಫ್​ಐಆರ್ ದಾಖಲಿಸಿದ್ದು, ನಿತಿನ್ ಡಿಯೋಕರ್ ಸಲ್ಲಿಸಿದ್ದ ದೂರಿನ ಆಧಾರದಲ್ಲಿ ತನಿಖೆ ನಡೆಸುತ್ತಿದ್ದಾರೆ.

ಎಫ್​ಐಆರ್​​ನಲ್ಲಿ 140 ಮಂದಿಯ ಸಾಕ್ಷ್ಯದ ಬಗ್ಗೆ ಉಲ್ಲೇಖಿಸಲಾಗಿದೆ. ಅವರಲ್ಲಿ ಟಿಆರ್​​ಪಿ ನೀಡುವ ಸಂಸ್ಥೆ ಬಾರ್ಕ್​​​ನ ಫಾರೆನ್ಸಿಕ್ ಆಡಿಟರ್ಸ್​ ಮತ್ತು ಸದಸ್ಯರು ಕೂಡ ಸೇರಿದ್ದಾರೆ.

-masthmagaa.com

Contact Us for Advertisement

Leave a Reply