masthmagaa.com:
ಮುಂಬೈ: ಟಿಆರ್ಪಿ ಹಗರಣ ಸಂಬಂಧ ರಿಪಬ್ಲಿಕ್ ಟಿವಿ ಸಿಇಒ ವಿಕಾಸ್ ಕಾಂಚನ್ದಾನಿಯನ್ನು ಮುಂಬೈ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಈ ಮೂಲಕ ಈ ಪ್ರಕರಣದಲ್ಲಿ 13 ಮಂದಿ ಬಂಧನಕ್ಕೆ ಒಳಗಾದಂತಾಗಿದೆ. ಮುಂಬೈ ಪೊಲೀಸರು ಅಕ್ಟೋಬರ್ 9ರಂದು ಎಫ್ಐಆರ್ ದಾಖಲಿಸಿದ್ದು, ನಿತಿನ್ ಡಿಯೋಕರ್ ಸಲ್ಲಿಸಿದ್ದ ದೂರಿನ ಆಧಾರದಲ್ಲಿ ತನಿಖೆ ನಡೆಸುತ್ತಿದ್ದಾರೆ.
ಎಫ್ಐಆರ್ನಲ್ಲಿ 140 ಮಂದಿಯ ಸಾಕ್ಷ್ಯದ ಬಗ್ಗೆ ಉಲ್ಲೇಖಿಸಲಾಗಿದೆ. ಅವರಲ್ಲಿ ಟಿಆರ್ಪಿ ನೀಡುವ ಸಂಸ್ಥೆ ಬಾರ್ಕ್ನ ಫಾರೆನ್ಸಿಕ್ ಆಡಿಟರ್ಸ್ ಮತ್ತು ಸದಸ್ಯರು ಕೂಡ ಸೇರಿದ್ದಾರೆ.
-masthmagaa.com
Contact Us for Advertisement