ಕೊರೋನಾ ಪರೀಕ್ಷೆಗೆ ರೇವಣ್ಣ ಡೋಂಟ್​ಕೇರ್​…ಸೀದಾ ಒಳನುಗ್ಗಿದ ರೇವಣ್ಣ..!

masthmagaa.com:

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ವೈರಸ್ ಹರಡುತ್ತಿರುವ ಹಿನ್ನೆಲೆಯಲ್ಲಿ ಎಲ್ಲೆಡೆಯೂ ಥರ್ಮಲ್ ಸ್ಕ್ರೀನಿಂಗ್ ಟೆಸ್ಟ್ ಮಾಡಲಾಗುತ್ತಿದೆ. ಅದೇ ರೀತಿ ವಿಧಾನಸಭೆ ಅಧಿವೇಶನಕ್ಕೆ ಬರುವ ಎಲ್ಲಾ ಶಾಸಕರು, ಸಚಿವರಿಗೂ ಪರೀಕ್ಷೆ ನಡೆಸಲಾಗುತ್ತಿದೆ. ಅದರಂತೆ ಸಿದ್ದರಾಮಯ್ಯ,  ಸಚಿವರು, ಶಾಸಕರು ಸೇರಿದಂತೆ ಎಲ್ಲರೂ ಪರೀಕ್ಷೆ ನಡೆಸಿಕೊಂಡು, ಕೈಗೆ ಸ್ಯಾನಿಟೈಸರ್ ಹಾಕಿಕೊಂಡು ಒಳಗೆ ಹೋದ್ರು. ಆದ್ರೆ ಈ ವೇಳೆ ಅಲ್ಲಿಗೆ ಬಂದ ರೇವಣ್ಣಗೂ ಸಿಬ್ಬಂದಿ ಪರೀಕ್ಷೆ ನಡೆಸಲು ಮುಂದಾದ್ರು. ಆದ್ರೆ ರೇವಣ್ಣ ಪರೀಕ್ಷೆಗೆ ನಿರಾಕರಿಸಿ ಸೀದಾ ಒಳಗೆ ಹೋದ್ರು. ರೇವಣ್ಣರ ಬೇಜವಾಬ್ದಾರಿ ವರ್ತನೆ ಈಗ ವ್ಯಾಪಕ ಟೀಕೆಗೆ ಗುರಿಯಾಗಿದೆ.

ಇದೇ ವೇಳೆ ಮಾತನಾಡಿದ ಸಿಎಂ ಯಡಿಯೂರಪ್ಪನವರು ರಾಜ್ಯದಲ್ಲಿ ಹೇರಲಾಗಿರುವ ನಿರ್ಬಂಧ ಮತ್ತೂ ಒಂದು ವಾರ ಮುಂದುವರಿಯುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply