ಜಲಫಿರಂಗಿ ಬಂದ್ ಮಾಡಿದವನ ಮೇಲೆ ಕೊಲೆ ಕೇಸ್​​..!

masthmagaa.com:

ಹರಿಯಾಣ: ರೈತರ ಮೇಲೆ ನೀರು ಹಾರಿಸುತ್ತಿದ್ದ ವಾಹನದ ಮೇಲೆ ಹತ್ತಿ ಜಲ ಫಿರಂಗಿಯನ್ನು ಬಂದ್ ಮಾಡಿದ್ದ ಯುವಕನ ವಿರುದ್ಧ ಕೊಲೆ ಕೇಸ್ ದಾಖಲಿಸಲಾಗಿದೆ. ಕೇಂದ್ರ ಸರ್ಕಾರದ ಕೃಷಿ ಕಾನೂನಿನ ವಿರುದ್ಧ ಹರಿಯಾಣದ ಅಂಬಾಲದಲ್ಲಿ ಪ್ರತಿಭಟನೆ ನಡೆಯುತ್ತಿತ್ತು. ಈ ವೇಳೆ ಪೊಲೀಸರು ರೈತರನ್ನು ಹತ್ತಿಕ್ಕಲು ಜಲಫಿರಂಗಿ ಪ್ರಯೋಗಿಸಿ, ಲಾಠಿ ಚಾರ್ಜ್ ಮಾಡ್ತಿದ್ರು. ಈ ವೇಳೆ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ 26 ವರ್ಷದ ನವದೀಪ್ ಸಿಂಗ್ ಎಂಬಾತ ಪೊಲೀಸರ ವಾಹನದ ಮೇಲೆ ಹತ್ತಿ ಜಲಫಿರಂಗಿ ಬಂದ್ ಮಾಡಿದ್ದ.. ಇದಾದ ಬಳಿಕ ಆತನನ್ನು ಹೀರೋ ರೀತಿಯಲ್ಲಿ ನೋಡಲಾಗ್ತಿತ್ತು. ಇದೀಗ ನವದೀಪ್ ಸಿಂಗ್​ನನ್ನು ಪೊಲೀಸರು ಕೊಲೆ ಕೇಸ್ ಹಾಕಿದ್ದಾರೆ. ಜೊತೆಗೆ ದಂಗೆಗೆ ಪ್ರಚೋದನೆ ಮತ್ತು ಕೊರೋನಾ ನಿಯಮಗಳ ಉಲ್ಲಂಘನೆ ಆರೋಪ ಕೂಡ ಹೊರಿಸಿದ್ದಾರೆ.

-masthmagaa.com

Contact Us for Advertisement

Leave a Reply