masthmagaa.com:
ಹರಿಯಾಣ: ರೈತರ ಮೇಲೆ ನೀರು ಹಾರಿಸುತ್ತಿದ್ದ ವಾಹನದ ಮೇಲೆ ಹತ್ತಿ ಜಲ ಫಿರಂಗಿಯನ್ನು ಬಂದ್ ಮಾಡಿದ್ದ ಯುವಕನ ವಿರುದ್ಧ ಕೊಲೆ ಕೇಸ್ ದಾಖಲಿಸಲಾಗಿದೆ. ಕೇಂದ್ರ ಸರ್ಕಾರದ ಕೃಷಿ ಕಾನೂನಿನ ವಿರುದ್ಧ ಹರಿಯಾಣದ ಅಂಬಾಲದಲ್ಲಿ ಪ್ರತಿಭಟನೆ ನಡೆಯುತ್ತಿತ್ತು. ಈ ವೇಳೆ ಪೊಲೀಸರು ರೈತರನ್ನು ಹತ್ತಿಕ್ಕಲು ಜಲಫಿರಂಗಿ ಪ್ರಯೋಗಿಸಿ, ಲಾಠಿ ಚಾರ್ಜ್ ಮಾಡ್ತಿದ್ರು. ಈ ವೇಳೆ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ 26 ವರ್ಷದ ನವದೀಪ್ ಸಿಂಗ್ ಎಂಬಾತ ಪೊಲೀಸರ ವಾಹನದ ಮೇಲೆ ಹತ್ತಿ ಜಲಫಿರಂಗಿ ಬಂದ್ ಮಾಡಿದ್ದ.. ಇದಾದ ಬಳಿಕ ಆತನನ್ನು ಹೀರೋ ರೀತಿಯಲ್ಲಿ ನೋಡಲಾಗ್ತಿತ್ತು. ಇದೀಗ ನವದೀಪ್ ಸಿಂಗ್ನನ್ನು ಪೊಲೀಸರು ಕೊಲೆ ಕೇಸ್ ಹಾಕಿದ್ದಾರೆ. ಜೊತೆಗೆ ದಂಗೆಗೆ ಪ್ರಚೋದನೆ ಮತ್ತು ಕೊರೋನಾ ನಿಯಮಗಳ ಉಲ್ಲಂಘನೆ ಆರೋಪ ಕೂಡ ಹೊರಿಸಿದ್ದಾರೆ.
-masthmagaa.com
Contact Us for Advertisement