masthmagaa.com:
ಕೊರೋನಾ ಮಹಾಮಾರಿಗೆ ದೇಶದಲ್ಲಿ 77 ಮೃತಪಟ್ಟಿದ್ದಾರೆ ಅಂತ ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ. ಜೊತೆಗೆ ಇದುವರೆಗೆ 3,374 ಪ್ರಕರಣಗಳು ದೃಢಪಟ್ಟಿದ್ದು, 267 ಜನ ಸಂಪೂರ್ಣವಾಗಿ ಗುಣಮುಖರಾಗಿ ಮನೆಗೆ ಹೋಗಿದ್ದಾರೆ.
ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು 490 ಪ್ರಕರಣಗಳು ದೃಢಪಟ್ಟಿದ್ದು, 24 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಉಳಿದಂತೆ ತಮಿಳುನಾಡಿನಲ್ಲಿ 485, ದೆಹಲಿಯಲ್ಲಿ 445, ಕೇರಳದಲ್ಲಿ 306 ಪ್ರಕರಣಗಳು ದೃಢಪಟ್ಟಿವೆ. ರಾಜ್ಯದಲ್ಲಿ 144 ಪ್ರಕರಣಗಳು ದೃಢಪಟ್ಟಿದ್ದು ನಾಲ್ವರು ಮೃತಪಟ್ಟಿದ್ದಾರೆ. ಈ ಪೈಕಿ 12 ಮಂದಿ ಗುಣಮುಖರಾಗಿದ್ದಾರೆ.
ಇದೇ ವೇಳೆ ಕೇಂದ್ರ ಆರೋಗ್ಯ ಇಲಾಖೆ ಸೋಂಕಿತರು ಹಾಗೂ ಮೃತಪಟ್ಟವರ ರಾಜ್ಯವಾರು ಪಟ್ಟಿಯನ್ನು ಬಿಡುಗಡೆ ಮಾಡಿದೆ.
-masthmagaa.com
Contact Us for Advertisement