ತ್ರಿಪುರಾ: 12ನೇ ತರಗತಿಯ ಯುವಕನೊಬ್ಬನನ್ನು ಹೊಡೆದು ಹತ್ಯೆಗೈಯ್ಯಲಾಗಿದೆ. ತ್ರಿಪುರಾದ ಗುವಾಹಟಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಹುಡುಗ ಪ್ರೀತಿಸುತ್ತಿದ್ದ ಹುಡುಗಿಯ ಮನೆಯಲ್ಲಿ ಆಕೆಯ ಸಂಬಂಧಿಕರೇ ಹೊಡೆದು ಕೊಂದಿದ್ದಾರೆ. 17 ವರ್ಷದ ರಿಪನ್ ಸರ್ಕಾರ್ ಮೃತ ದುರ್ದೈವಿ. ಈತ ತನ್ನ ಚಿಕ್ಕಪ್ಪನ ಜೊತೆ ಅಗರ್ತಲದ ಗೊಮಾತಿಯಲ್ಲಿ ವಾಸವಿದ್ದ. ಈತನ ಪೋಷಕರು ಬಾಂಗ್ಲಾದೇಶದಲ್ಲಿ ವಾಸವಾಗಿದ್ದಾರೆ.
ಹುಡುಗ-ಹುಡುಗಿಯ ಪ್ರೀತಿಯ ವಿಷಯ ತಿಳಿದಿದ್ದ ಆಕೆಯ ಸಂಬಂಧಿಕರು ರಿಪನ್ನನ್ನು ಮನೆಗೆ ಕರೆದಿದ್ದರು. ಆದ್ರೆ ಅವರನ್ನು ನಂಬಿ ಹೋದ ರಿಪನ್, ಹೆಣವಾಗಿದ್ದಾನೆ. ಘಟನೆ ಸಂಬಂಧ 7 ಮಂದಿ ವಿರುದ್ಧ ಪ್ರಕರಣ ದಾಖಲಾಗಿದ್ದು, ಓರ್ವನನ್ನು ಬಂಧಿಸಲಾಗಿದೆ. ಉಳಿದವರು ತಲೆಮರೆಸಿಕೊಂಡಿದ್ದು, ಪೊಲೀಸರು ಬಲೆ ಬೀಸಿದ್ದಾರೆ.
ಘಟನೆ ನಡೆಯುತ್ತಿದ್ದಂತೆ ಸ್ಥಳೀಯರು ಯುವಕನ ಚಿಕ್ಕಪ್ಪ ಪ್ರಫುಲ್ಲ ಸರ್ಕಾರ್ಗೆ ವಿಷಯ ಮುಟ್ಟಿಸಿದ್ದಾರೆ. ಕೂಡಲೇ ಪ್ರಫುಲ್ಲಾ ಸರ್ಕಾರ್ ಸ್ಥಳಕ್ಕೆ ಬಂದಿದ್ದಾರೆ. ಅಲ್ಲದೆ ಹುಡುಗಿಯ ಸಂಬಂಧಿಕರಿಂದ ರಿಪನ್ ಸರ್ಕಾರ್ನನ್ನು ತಪ್ಪಿಸಲು ಯತ್ನಿಸಿದ್ದಾರೆ. ಆದ್ರೆ ಸಾಧ್ಯವಾಗಲೇ ಇಲ್ಲ. ನಂತರ ಸ್ಥಳಕ್ಕೆ ಬಂದ ಪೊಲೀಸರು ಹುಡುಗನನ್ನು ಆಸ್ಪತ್ರೆಗೆ ದಾಖಲಿಸಿದರೂ ಬದುಕುಳಿಯಲಿಲ್ಲ.
Contact Us for Advertisement