masthmagaa.com:
ಉತ್ತರ ಪ್ರದೇಶ: ದಬಂಗೋ ಎಂಬಲ್ಲಿ ಇಡೀ ಮಾನವ ಕುಲವೇ ನಾಚಿಕೆಯಿಂದ ತಲೆತಗ್ಗಿಸಬೇಕಾದ ಘಟನೆ ವರದಿಯಾಗಿದೆ. ಕೊರೋನಾ ವಿರುದ್ಧ ಹೋರಾಟದಲ್ಲಿ ಹಲವರು ಮಾನವೀಯತೆ ತೋರಿಸ್ತಿದ್ರೆ, ಇನ್ನು ಕೆಲವರು ತಮ್ಮೊಳಗಿರುವ ರಾಕ್ಷಸ ಬುದ್ಧಿಯನ್ನು ಪ್ರದರ್ಶಿಸುತ್ತಿದ್ದಾರೆ.
ಇಲ್ಲಿ ಗ್ರಾಮದ ಮುಖ್ಯಸ್ಥ ಸಾರ್ವಜನಿಕ ಸ್ಥಳಗಳಲ್ಲಿ ಸ್ಯಾನಿಟೈಸರ್ ಸ್ಪ್ರೇ ಮಾಡಿಸಲು ಕುನ್ವರ್ ಪಾಲ್ ಎಂಬ ಯುವಕನನ್ನು ಕರೆಸಿದ್ದರು. ಅದರಂತೆ ಕುನ್ವರ್ ಪಾಲ್ ಗ್ರಾಮದಲ್ಲಿ ಸ್ಯಾನಿಟೈಸರ್ ಸ್ಪ್ರೇ ಮಾಡುತ್ತಿದ್ದ. ಈ ವೇಳೆ ರಸ್ತೆಯಲ್ಲಿ ಹೋಗುತ್ತಿದ್ದ ಯುವಕನೊಬ್ಬನ ಕಾಲಿಗೆ ಸ್ಯಾನಿಟೈಸರ್ ಬಿದ್ದಿದೆ. ಇದ್ರಿಂದ ಕುನ್ವರ್ ಪಾಲ್ ಮತ್ತು ಆ ವ್ಯಕ್ತಿಯ ನಡುವೆ ಜಗಳ ನಡೆದಿದೆ. ಕೊನೆಗೆ ಅಲ್ಲಿಗೆ ಬಂದ ಆ ಯುವಕನ ನಾಲ್ವರು ಸ್ನೇಹಿತರು ಕುನ್ವರ್ ಪಾಲ್ ಬಾಯಿಗೆ ಸ್ಯಾನಿಟೈಸರ್ ಸ್ಪ್ರೇ ಮಾಡಿದ್ದಾರೆ.
ನಂತರ ಅಸ್ವಸ್ಥಗೊಂಡ ಕುನ್ವರ್ ಪಾಲ್ನನ್ನು ಆಸ್ಪತ್ರೆಗೆ ಸಾಗಿಸಲಾಯ್ತಾದ್ರೂ ಪ್ರಯೋಜನವಾಗಲಿಲ್ಲ..ಚಿಕಿತ್ಸೆ ಫಲಿಸದೇ ಕುನ್ವರ್ ಪಾಲ್ ಸಾವನ್ನಪ್ಪಿದ್ದಾನೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರೋ ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ಆರಂಭಿಸಿದ್ದಾರೆ.
-masthmagaa.com
Contact Us for Advertisement