masthmagaa.com:
ಮುಂದಿನ ಸಿಎಂ ಯಾರು ಅನ್ನೋ ಬಗ್ಗೆ ಚರ್ಚೆ ಮಾಡುವಂತಿಲ್ಲ ಅಂತ ಕಾಂಗ್ರೆಸ್ ಶಿಸ್ತುಪಾಲನಾ ಸಮಿತಿ ಪಕ್ಷದ ನಾಯಕರಿಗೆ ತಾಕೀತು ಮಾಡಿದೆ ಎನ್ನಲಾಗಿದೆ. ರಾಜ್ಯ ಕಾಂಗ್ರೆಸ್ನಲ್ಲಿ ಕಳೆದ ಹಲವು ದಿನಗಳಿಂದ ಮುಂದಿನ ಸಿಎಂ ಯಾರು ಅನ್ನೋ ಬಗ್ಗೆ ಚರ್ಚೆ ನಡೆಯುತ್ತಿದೆ. ಕೆಲವರಂತೂ ಸಿದ್ದರಾಮಯ್ಯನೇ ಮುಂದಿನ ಸಿಎಂ ಅಂತ ಬಹಿರಂಗವಾಗಿ ಹೇಳಿದ್ರು. ಪ್ರಮುಖವಾಗಿ ಜಮೀರ್ ಅಹ್ಮದ್ ಖಾನ್, ಸೌಮ್ಯ ರೆಡ್ಡಿ ಮತ್ತು ಪ್ರಕಾಶ್ ಹುಕ್ಕೇರಿ ಇವರೆಲ್ಲಾ. ಇದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಬಣಕ್ಕೆ ಇರುಸು ಮುರುಸು ತಂದಿಟ್ಟಿತ್ತು. ಯಾಕಂದ್ರೆ ಡಿಕೆಶಿಗೂ ಸಿಎಂ ಆಗಬೇಕು ಅನ್ನೋ ಆಸೆ ಇದೆ. ಹೀಗಾಗಿ ಇದೀಗ ಮುಂದಿನ ಸಿಎಂ ಯಾರು ಅನ್ನೋ ಬಗ್ಗೆ ಬಹಿರಂಗ ಹೇಳಿಕೆ ಕೊಡದಂತೆ ತನ್ನ ನಾಯಕರಿಗೆ ಕಾಂಗ್ರೆಸ್ ಸೂಚಿಸಿದೆ. ಅಲ್ಲದೆ ಜಮೀರ್ ಅಹ್ಮದ್ ಖಾನ್, ಸೌಮ್ಯ ರೆಡ್ಡಿ ಮತ್ತು ಪ್ರಕಾಶ್ ಹುಕ್ಕೇರಿಗೆ ನೋಟಿಸ್ ನೀಡಲಾಗಿದೆ ಅಂತ ಮೂಲಗಳು ತಿಳಿಸಿವೆ.
-masthmagaa.com
Contact Us for Advertisement