masthmagaa.com:
ಉತ್ತರ ಪ್ರದೇಶ: ಪ್ರಧಾನಿ ನರೇಂದ್ರ ಮೋದಿಯವರು ನಿನ್ನೆ ಮನೆಯ ಬಾಲ್ಕನಿಗೆ ಬಂದು ದೀಪ ಅಥವಾ ಮೋಂಬತ್ತಿ ಹಚ್ಚಿ ಎಂದು ಕರೆ ನೀಡಿದ್ದರು. ಜೊತೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜನ ರಸ್ತೆಗೆ ಇಳಿದು, ಸಾಮಾಜಿಕ ಅಂತರವನ್ನು ಮರೆಯಬೇಡಿ ಎಂದು ಮನವಿ ಕೂಡ ಮಾಡಿದ್ದರು. ಆದ್ರೆ ಉತ್ತರ ಪ್ರದೇಶದ ಬಲರಾಂಪುರ ಬಿಜೆಪಿ ಜಿಲ್ಲಾಧ್ಯಕ್ಷೆ ಮಂಜು ತಿವಾರಿ ಉತ್ಸಾಹಿತರಾಗಿ ಮನೆಯಿಂದ ಹೊರಬಂದು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಅಷ್ಟೇ ಅಲ್ಲ.. ಇದನ್ನು ವಿಡಿಯೋ ಮಾಡಿ ಫೇಸ್ಬುಕ್ನಲ್ಲೂ ಹಾಕಿಕೊಂಡಿದ್ದಾರೆ. ಇದಾದ ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ತುಂಬಾ ವೈರಲ್ ಆಗಿದ್ದು, ಮಹಿಳೆ ವಿರುದ್ಧ ಕೇಸ್ ದಾಖಲಿಸಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಮಂಜು ತಿವಾರಿ, ನಾನು ಮಾಡಿದ್ದು ತಪ್ಪು ಅಂತ ಗೊತ್ತಿದೆ. ನಾನು ಮನೆಯಿಂದ ಹೊರಬಂದು ನೋಡಿದಾಗ ಎಲ್ಲರೂ ದೀಪ, ಮೊಂಬತ್ತಿ ಹಚ್ಚಿದ್ದರು. ಇದನ್ನು ಕಂಡ ನನಗೆ ಇದು ದೀಪಾವಳಿ ಅಂತ ಅನ್ನಿಸಿತು. ಹೀಗಾಗಿ ಉತ್ಸಾಹಿತಳಾಗಿ ಗಾಳಿಯಲ್ಲಿ ಗುಂಡು ಹಾರಿಸಿದೆ. ಇದಕ್ಕಾಗಿ ಕ್ಷಮೆಯಾಚಿಸುತ್ತೇನೆ ಅಂತ ಹೇಳಿದ್ದಾರೆ.
-masthmagaa.com