masthmagaa.com:
ಉತ್ತರ ಪ್ರದೇಶ: ನಿಮ್ ಕಣ್ಣು ಮುಚ್ಚಿ, ಮಕ್ಕಳ ಕಣ್ಣನ್ನ ಮುಚ್ಚಿಟ್ಕೊಳ್ಳಿ..ಆ ಕಡೆ ತಿರುಗಿ ಕೂತ್ಕೊಳ್ಳಿ.. ಇದೇನಿದು ಅಂತೀರಾ..? ಉತ್ತರಪ್ರದೇಶದಲ್ಲಿ ವಲಸೆ ಬಂದ ಕಾರ್ಮಿಕರನ್ನು ರಸ್ತೆಯಲ್ಲಿ ಕೂರಿಸಿ, ಕಣ್ಣು ಮುಚ್ಚಿಕೊಳ್ಳುವಂತೆ ಹೇಳಿ, ಅವರ ಮೇಲೆ ಕ್ರಿಮಿನಾಶಕ ಸಿಂಪಡಣೆ ಮಾಡಲಾಗುತ್ತಿದೆ. ನಂತರವಷ್ಟೇ ಅವರನ್ನು ಊರಿನ ಒಳಗೆ ಕರೆದುಕೊಳ್ತಿದ್ದಾರೆ.
ಭಾರತ ಲಾಕ್ಡೌನ್ ಬಳಿಕ ದೇಶಾದ್ಯಂತ ಸಾವಿರಾರು ಜನ ಕುಟುಂಬ ಸಮೇತ ತಮ್ಮ ತಮ್ಮ ಊರುಗಳಿಗೆ ವಲಸೆ ಬರ್ತಿದ್ದಾರೆ. ಎಲ್ಲಿ ಅವರಿಂದ ಕೊರೋನಾ ಹರಡುತ್ತೋ ಅನ್ನೋ ಭಯದಲ್ಲಿ ಉತ್ತರಪ್ರದೇಶದಲ್ಲಿ ಇಂಥ ಕೃತ್ಯ ಎಸಗಲಾಗಿದೆ. ಗುಂಪು ಗುಂಪಾಗಿ ಕೂರಿಸಿ ಅವರಿಗೆಲ್ಲಾ ಕ್ರಿಮಿನಾಶಕ ಸ್ಪ್ರೇ ಮಾಡ್ತಿದ್ದಾರೆ. ಈ ರೀತಿಯ ನಡೆಗೆ ಎಲ್ಲೆಡೆ ತೀವ್ರ ಆಕ್ರೋಶ ವ್ಯಕ್ತವಾಗ್ತಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾಡಳಿತ, ನಾವು ರಾಜ್ಯದೊಳಗೆ ಬರುವ ಬಸ್ಗಳನ್ನು ಸ್ಯಾನಿಟೈಸರ್ನಿಂದ ಸ್ವಚ್ಛಗೊಳಿಸುವಂತೆ ಸೂಚಿಸಿದ್ದೆವು. ಆದ್ರೆ ಸಿಬ್ಬಂದಿ ಈ ರೀತಿ ಎಡವಟ್ಟು ಮಾಡಿದ್ದಾರೆ. ಅವರೆಲ್ಲರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತೆ ಅಂತ ಸ್ಪಷ್ಟನೆ ನೀಡಿದೆ.
-masthmagaa.com