masthmagaa.com:
ಉತ್ತರ ಪ್ರದೇಶ: ಕೊರೋನಾ ವೈರಸ್ ಹಿನ್ನೆಲೆಯಲ್ಲಿ ದೇಶವನ್ನು ಲಾಕ್ಡೌನ್ ಮಾಡಲಾಗಿದೆ. ಹೀಗಾಗಿ ಮೆಡಿಸಿನ್ ಸೇರಿದಂತೆ ಅಗತ್ಯ ವಸ್ತುಗಳ ಪೂರೈಕೆಗಾಗಿ ಉತ್ತರ ಪ್ರದೇಶ ಸರ್ಕಾರ ಎಮರ್ಜೆನ್ಸಿ ಹೆಲ್ಪ್ಲೈನ್ ಸೇವೆಯ ವ್ಯವಸ್ಥೆ ಮಾಡಿದೆ.
ಆದ್ರೆ ನಿನ್ನೆ ಈ ಹೆಲ್ಪ್ಲೈನ್ ನಂಬರ್ಗೆ ಕರೆ ಮಾಡಿದ ವ್ಯಕ್ತಿಯೊಬ್ಬ 4 ಸಮೋಸಾ ಕಳುಹಿಸುವಂತೆ ಬೇಡಿಕೆ ಇಟ್ಟಿದ್ದಾನೆ. ಆಗ ಸಿಬ್ಬಂದಿ ಅಗತ್ಯ ವಸ್ತುಗಳನ್ನು ಮಾತ್ರವೇ ಪೂರೈಸಲಾಗುತ್ತೆ. ಸಮೋಸ ಪೂರೈಕೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಆದ್ರೆ ವ್ಯಕ್ತಿ ಪದೇ ಪದೇ ಕರೆ ಮಾಡಿ, ಸಮೋಸಾ ತಂದುಕೊಡಿ ಎಂದು ಬೇಡಿಕೆ ಇಟ್ಟಿದ್ದಾರೆ. ಕೊನೆಗೆ ಆತ ಇರುವಲ್ಲಿಗೆ ಬಂದ ಅಧಿಕಾರಿಗಳು ರಾತ್ರೋರಾತ್ರಿ ಆತನ ಬಳಿ ಚರಂಡಿ ಕ್ಲೀನ್ ಮಾಡಿಸಿ, ಶಿಕ್ಷಿಸಿದ್ದಾರೆ.
ಈ ಬಗ್ಗೆ ರಾಮ್ಪುರ ಜಿಲ್ಲಾಧಿಕಾರಿ ಟ್ವಿಟ್ಟರ್ನಲ್ಲಿ ಮಾಹಿತಿ ನೀಡಿದ್ದು, ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ.
-masthmagaa.com
Contact Us for Advertisement