ಜೈ ಜವಾನ್, ಜೈ ಕಿಸಾನ್​: ಜವಾನ್ ಕೈಯಲ್ಲೇ ಕಿಸಾನ್​​​ಗೆ ಲಾಠಿಯೇಟು: ರಾಹುಲ್ ಗಾಂಧಿ

masthmagaa.com:

ದೆಹಲಿ: ಕೇಂದ್ರ ಸರ್ಕಾರದ ಕೃಷಿ ಕಾನೂನಿನ ವಿರುದ್ಧ ನಡೆಯುತ್ತಿರುವ ರೈತರ ಪ್ರತಿಭಟನೆ ನಿಲ್ಲುವ ಲಕ್ಷಣ ಕಾಣಿಸುತ್ತಿಲ್ಲ. ಪಂಜಾಬ್, ಹರಿಯಾಣ, ಉತ್ತರ ಪ್ರದೇಶದಿಂದ ರೈತರು ದೆಹಲಿಯತ್ತ ಕಾಲ್ನಡಿಗೆ ಯಾತ್ರೆ ಕೈಗೊಂಡಿದ್ದಾರೆ. ಆದ್ರೆ ದೆಹಲಿ ಪ್ರವೇಶಿಸುವ ಮುನ್ನವೇ ರೈತರನ್ನು ತಡೆಯಲು ಯತ್ನಿಸಲಾಗುತ್ತೆ. ರೈತರಿಗೆ ಯೋಧರು ಲಾಠಿ ಬೀಸುತ್ತಿರುವ ಒಂದು ಫೋಟೋ ಶೇರ್ ಮಾಡಿರುವ ರಾಹುಲ್ ಗಾಂಧಿ, ಇದು ತುಂಬಾ ದುಃಖಕರ ಫೋಟೋ.. ಜೈ ಜವಾನ್ ಜೈ ಕಿಸಾನ್ ಅನ್ನೋದು ನಮ್ಮ ಘೋಷಣೆಯಾಗಿತ್ತು. ಆದ್ರೆ ಪ್ರಧಾನಿ ಮೋದಿಯವರ ಅಹಂಕಾರ ಇಂದು ಯೋಧರನ್ನು ರೈತರಿಗೆ ವಿರುದ್ಧವಾಗಿ ತಂದು ನಿಲ್ಲಿಸಿದೆ. ಇದು ತುಂಬಾ ಅಪಾಯಕಾರಿ ಕೂಡ ಹೌದು ಅಂತ ಬರೆದುಕೊಂಡಿದ್ದಾರೆ.

ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಕೂಡ ಕೇಂದ್ರ ಸರ್ಕಾರದ ಈ ನಡೆಯನ್ನು ಟೀಕಿಸಿದ್ದು, ಪ್ರಧಾನಿ ಮೋದಿಯವರು ತಮ್ಮ ಕೋಟ್ಯಾಧಿಪತಿ ಮಿತ್ರರ ಜೊತೆ ದೆಹಲಿಗೆ ಬರುವಾಗ ರೆಡ್ ಕಾರ್ಪೆಟ್ ಹಾಕಿ ಸ್ವಾಗತಿಸ್ತಾರೆ. ಆದ್ರೆ ರೈತರು ಬಂದ್ರೆ ರಸ್ತೆಯಲ್ಲೇ ತಡೆಯುತ್ತಾರೆ.. ದೆಹಲಿ ರೈತರಿಗೆ ವಿರುದ್ಧವಾಗಿ ಕಾನೂನು ರೂಪಿಸೋದು ಸರಿ.. ಆದ್ರೆ ರೈತರು ಸರ್ಕಾರಕ್ಕೆ ತಮ್ಮ ಮಾತನ್ನು ತಿಳಿಸಲು ದೆಹಲಿಗೆ ಬರೋದು ತಪ್ಪು ಅಲ್ವಾ..? ನೋಡಿ ಇದು ಬಿಜೆಪಿ ಸರ್ಕಾರದಲ್ಲಿ ದೇಶದ ವ್ಯವಸ್ಥೆ ಅಂತ ಟ್ವೀಟ್ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply