masthmagaa.com:
ತನ್ನ ಸೋದರ ಸೊಸೆಗೆ ಕಿರುಕುಳ ನೀಡುತ್ತಿದ್ದವರ ವಿರುದ್ಧ ದೂರು ನೀಡಿದ್ದ ಪತ್ರಕರ್ತನನ್ನು ಕಿಡಿಗೇಡಿಗಳು ಗುಂಡು ಹಾರಿಸಿ ಹತ್ಯೆ ಮಾಡಿರುವ ಘಟನೆ ಉತ್ತರಪ್ರದೇಶದ ಘಾಜಿಯಾಬಾದ್ನಲ್ಲಿ ನಡೆದಿದೆ. ಪತ್ರಕರ್ತ ವಿಕ್ರಮ್ ಜೋಶಿ ಕೊಲೆಯಾದ ವ್ಯಕ್ತಿ. ಅಂದ್ಹಾಗೆ ತಮ್ಮ ಸೊಸೆಗೆ ಕಿರುಕುಳ ನೀಡುತ್ತಿದ್ದ ಪುಂಡರ ವಿರುದ್ಧ ವಿಕ್ರಮ್ ಜೋಶಿ ಜುಲೈ 16ರಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ರು.
ಪ್ರಕರಣ ದಾಖಲಿಸಿ 4 ದಿನಗಳ ನಂತರ, ಅಂದ್ರೆ ಜುಲೈ 20ರಂದು ರಾತ್ರಿ 10.30ರ ಸುಮಾರಿಗೆ ವಿಕ್ರಮ್ ಜೋಶಿ ತಮ್ಮ ಇಬ್ಬರು ಹೆಣ್ಣು ಮಕ್ಕಳ ಜೊತೆ ಬೈಕ್ನಲ್ಲಿ ಹೋಗುತ್ತಿದ್ದಾಗ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದರು. ಈ ವೇಳೆ ಹೆದರಿದ ಮಕ್ಕಳು ದೂರ ಓಡಿ ಹೋದ್ರು. ನೋಡ ನೋಡುತ್ತಿದ್ದಂತೆ ದುಷ್ಕರ್ಮಿಯೊಬ್ಬ ಪತ್ರಕರ್ತನ ತಲೆಗೆ ಬಂದೂಕು ಇಟ್ಟು ಗುಂಡು ಹಾರಿಸಿಯೇ ಬಿಟ್ಟ. ಈ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದವು.
CCTV footage of journalist Vikram Joshi in UP's Ghaziabad waylaid by armed assailants, assaulted in the middle of a busy street and shot at in the head. Joshi, in critical condition now, had recently made a police complaint against local goons for harassing her niece. pic.twitter.com/yiCkKJgWQ9
— Piyush Rai (@Benarasiyaa) July 21, 2020
ಗುಂಡು ತಗುಲಿ ಗಂಭೀರ ಸ್ಥಿತಿಯಲ್ಲಿ ಬಿದ್ದಿದ್ದ ವಿಕ್ರಮ್ ಜೋಶಿಯವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಇವತ್ತು ಮೃತಪಟ್ಟಿದ್ದಾರೆ. ಪ್ರಕರಣ ಸಂಬಂಧ ಇದುವರೆಗೆ ಮೂವರನ್ನು ಅರೆಸ್ಟ್ ಮಾಡಲಾಗಿದ್ದು, 6 ಜನರನ್ನು ವಶಕ್ಕೆ ಪಡೆಯಲಾಗಿದೆ. ಓರ್ವ ತಲೆಮರೆಸಿಕೊಂಡಿದ್ದಾನೆ. ಅಲ್ಲದೆ ಕರ್ತವ್ಯ ಲೋಪ ಹಿನ್ನೆಲೆ ಇಬ್ಬರು ಪೊಲೀಸ್ ಸಿಬ್ಬಂದಿಯನ್ನ ಅಮಾನತು ಮಾಡಲಾಗಿದೆ.
-masthmagaa.com
Contact Us for Advertisement