ಕೊರೋನಾ ಹೋರಾಟದಲ್ಲಿ ರಾಜ್ಯಕ್ಕೆ ಸ್ವಲ್ಪ ಸಮಾಧಾನದ ಸುದ್ದಿ..!

masthmagaa.com:

ಕೊರೋನಾ ವೈರಸ್ ಹಾವಳಿ ನಡುವೆ ರಾಜ್ಯಕ್ಕೆ ಸ್ವಲ್ಪ ಸಮಾಧಾನಪಡುವಂತಹ ಸುದ್ದಿ ಸಿಕ್ಕಿದೆ. ಅದೇನಂದ್ರೆ ಇವತ್ತು ಹೊಸ ಕೊರೋನಾ ಪೀಡಿತರ ಸಂಖ್ಯೆಯಲ್ಲಿ ಭಾರಿ ಪ್ರಮಾಣದ ಇಳಿಕೆ ಕಂಡು ಬಂದಿದೆ. ಮೊನ್ನೆ 44, ನಿನ್ನೆ 25 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿತ್ತು. ಆದ್ರೆ ಇವತ್ತು ಕೇವಲ ನಾಲ್ವರಲ್ಲಿ ಕೊರೋನಾ ಸೋಂಕು ದೃಢಪಟ್ಟಿದ್ದು, ಸ್ವಲ್ಪ ನಿಟ್ಟುಸಿರು ಬಿಡುವಂತಾಗಿದೆ.

ಆದ್ರೆ ಆತಂಕದ ವಿಚಾರ ಅಂದ್ರೆ ಇಂದು ಸೋಂಕು ಪತ್ತೆಯಾಗಿರುವ ನಾಲ್ವರೂ ಮೈಸೂರಿನವರೇ ಆಗಿದ್ದಾರೆ. ಇವರಲ್ಲಿ ಇಬ್ಬರು ದೆಹಲಿಗೆ ಪ್ರಯಾಣ ಮಾಡಿರುವ ಹಿನ್ನೆಲೆ ಹೊಂದಿದ್ರೆ, ಉಳಿದ ಇಬ್ಬರು ನಂಜನಗೂಡು ಕಾರ್ಖಾನೆಗೆ ಸಂಬಂಧಪಟ್ಟವರಾಗಿದ್ದಾರೆ.

ಈ ಮೂಲಕ ರಾಜ್ಯದಲ್ಲಿ ಸೋಂಕು ಪೀಡಿತರ ಸಂಖ್ಯೆ 388ಕ್ಕೆ ಏರಿಕೆಯಾಗಿದ್ದು, 14 ಮಂದಿ ಸಾವನ್ನಪ್ಪಿದಂತಾಗಿದೆ. ಈವರೆಗೆ ರಾಜ್ಯದಲ್ಲಿ 105 ಮಂದಿ ಸೋಂಕಿತರು ಗುಣಮುಖರಾಗಿದ್ದಾರೆ.

-masthmagaa.com

Contact Us for Advertisement

Leave a Reply