masthmagaa.com:
ಕೇರಳ: ಕ್ವಾರಂಟೈನ್ನಲ್ಲಿದ್ದ ಐಎಎಸ್ ಅಧಿಕಾರಿಯೊಬ್ಬರು ನಿಯಮ ಉಲ್ಲಂಘಿಸಿ ಹೊರಗೆ ಬಂದಿದ್ದು, ಅವರ ವಿರುದ್ಧ ಪೊಲೀಸರು ಕೇಸ್ ದಾಖಲಿಸಿದ್ದಾರೆ. ಕೇರಳದ ಕೊಲ್ಲಂನ ಉಪ ಜಿಲ್ಲಾಧಿಕಾರಿಯಾಗಿದ್ದ ಅನುಪಮ್ ಮಿಶ್ರಾ ಅವರನ್ನು ಕ್ವಾರಂಟೈನ್ನಲ್ಲಿ ಇರಿಸಲಾಗಿತ್ತು. ಅಲ್ಲದೆ 14 ದಿನಗಳ ಕಾಲ ಮನೆಯಲ್ಲೇ ಇರುವಂತೆ ಸೂಚಿಸಲಾಗಿತ್ತು. ಆದ್ರೆ ಅವರು ಸರ್ಕಾರಕ್ಕೆ ತಿಳಿಸದೇ ಉತ್ತರ ಪ್ರದೇಶದ ಕಾನ್ಪುರದಲ್ಲಿರೋ ತಮ್ಮ ಮನೆಗೆ ತೆರಳಿದ್ದು, ನಿಯಮ ಉಲ್ಲಂಘಿಸಿದ್ದಾರೆ.
ಅನುಪಮ್ ಮಿಶ್ರಾ ಇತ್ತೀಚೆಗಷ್ಟೇ ಸಿಂಗಾಪುರ್ ಟೂರ್ಗೆ ಹೋಗಿ ಬಂದಿದ್ದರಿಂದ, 14 ದಿನಗಳ ಕಾಲ ಮನೆಯಲ್ಲಿ ಇರಿ ಅಂತ ಮಾರ್ಚ್ 19ರಂದು ಸೂಚಿಸಲಾಗಿತ್ತು. ಆದ್ರೆ ಭಾರತ ಲಾಕ್ಡೌನ್ ಘೋಷಣೆಗೂ ಒಂದು ದಿನ ಮುನ್ನ ಅಂದ್ರೆ ಮಾರ್ಚ್ 23ರಂದು ಅನುಪಮ್ ಮಿಶ್ರಾ ಯಾರಿಗೂ ಹೇಳದೇ ಕಾನ್ಪುರಕ್ಕೆ ಹೋಗಿದ್ದಾರೆ.
ನಂತರ ಅನುಪಮ್ ಮಿಶ್ರಾ ಕರೆಗಳಿಗೆ ಪ್ರತಿಕ್ರಿಯಿಸದೇ ಇದ್ದಾಗ ಪೊಲೀಸರು ಲೊಕೇಷನ್ ಟ್ರೇಸ್ ಮಾಡಿದ್ದಾರೆ. ಈ ವೇಳೆ ಅನುಪಮ್ ಉತ್ತರ ಪ್ರದೇಶದ ಕಾನ್ಪುರದಲ್ಲಿದ್ದಾರೆ ಅನ್ನೋದು ತಿಳಿದುಬಂದಿದೆ.
-masthmagaa.com
Contact Us for Advertisement