masthmagaa.com:
ದೆಹಲಿ: ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳ ವಿರುದ್ಧ ನಡೆಯುತ್ತಿರುವ ರೈತರ ಹೋರಾಟ ಉಗ್ರ ರೂಪ ಪಡೆದುಕೊಂಡಿದೆ. ಪಂಜಾಬ್ ಮತ್ತು ಹರಿಯಾಣದಲ್ಲಿ ರಿಲಾಯನ್ಸ್ ಟವರ್ಗಳನ್ನು ಗುರಿಯಾಗಿಸಿ ದಾಳಿ ಮಾಡಲಾಗುತ್ತಿದೆ. ಹೀಗಾಗಿ ರಿಲಾಯನ್ಸ್ ತನ್ನ ಸಂಸ್ಥೆ ಮತ್ತು ಆಸ್ತಿಯ ರಕ್ಷಣೆಗಾಗಿ ಸರ್ಕಾರ ಹಸ್ತಕ್ಷೇಪ ಮಾಡಬೇಕು ಅಂತ ಆಗ್ರಹಿಸಿ ಕೋರ್ಟ್ ಮೆಟ್ಟಿಲೇರಿದೆ. ಜೊತೆಗೆ ಹೊಸ ಕೃಷಿ ಕಾನೂನುಗಳಿಗೂ ಕಂಪನಿಗೂ ಯಾವುದೇ ರೀತಿಯ ಸಂಬಂಧವಿಲ್ಲ. ನಮಗೆ ಕೃಷಿ ಕ್ಷೇತ್ರದಲ್ಲಿ ಯಾವುದೇ ಆಸಕ್ತಿ ಇಲ್ಲ.. ರೈತರ ಉತ್ಪನ್ನಗಳನ್ನು ನೇರವಾಗಿ ಖರೀದಿಸೋದೂ ಇಲ್ಲ.. ಆದ್ರೂ ಕೂಡ ಕೃಷಿ ಕಾನೂನುಗಳ ಜೊತೆ ರಿಲಾಯನ್ಸ್ ಸಂಸ್ಥೆಯನ್ನು ಜೋಡಿಸಿ, ಸಂಸ್ಥೆಗೆ ನಷ್ಟವುಂಟು ಮಾಡಲು ಮತ್ತು ಹೆಸರು ಹಾಳು ಮಾಡಲು ಪ್ರಯತ್ನಿಸಲಾಗುತ್ತಿದೆ ಅಂತ ಅಂತ ಕಂಪನಿ ತಿಳಿಸಿದೆ.
ಕೇಂದ್ರ ಸರ್ಕಾರದ ವಿರುದ್ಧದ ಕೋಪವನ್ನು ರೈತರು ರಿಲಾಯನ್ಸ್ ಸಂಸ್ಥೆಯ ಟವರ್ಗಳ ಮೇಲೆ ತೀರಿಸುತ್ತಿದ್ದಾರೆ. ಕೆಲವು ಕಡೆ ಟವರ್ ಕರೆಂಟ್ ಬಂದ್ ಮಾಡಲಾಗಿದ್ರೆ, ಇನ್ನು ಕೆಲವು ಕಡೆ ಕೇಬಲ್ ಕಟ್ ಮಾಡಿ, ಟವರ್ನ ಫೌಂಡೇಷನ್ ಧ್ವಂಸಗೊಳಿಸಲಾಗಿದೆ. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪಂಜಾಬ್ ಸಿಎಂ ಅಮರಿಂದರ್ ಸಿಂಗ್ ಕೂಡ ಸೂಚಿಸಿದ್ದಾರೆ.
-masthmagaa.com
Contact Us for Advertisement