ನನಗೇನಾದ್ರು ಆದ್ರೆ ಸೋನಿಯಾ ಗಾಂಧಿಯೇ ಹೊಣೆ ಎಂದ ಖ್ಯಾತ ಪತ್ರಕರ್ತ..!

masthmagaa.com:

ಮುಂಬೈ: ಖ್ಯಾತ ಪತ್ರಕರ್ತ ಅರ್ನಬ್ ಗೋಸ್ವಾಮಿ ಮೇಲೆ ದುಷ್ಕಮಿಗಳು ದಾಳಿ ನಡೆಸಿದ್ದಾರೆ. ನಿನ್ನೆ ರಾತ್ರಿ ಮುಂಬೈನಲ್ಲಿ ಈ ಘಟನೆ ನಡೆದಿದ್ದು, ಈ ಬಗ್ಗೆ ವಿಡಿಯೋವೊಂದರ ಮೂಲಕ ಅರ್ನಬ್ ಗೋಸ್ವಾಮಿ ಮಾಹಿತಿ ನೀಡಿದ್ದಾರೆ. ನಾನು, ನನ್ನ ಪತ್ನಿ ಜೊತೆ ಕಚೇರಿಯಿಂದ ಮನೆಗೆ ಹೊರಟಿದ್ದೆ. ಈ ವೇಳೆ ಬೈಕ್​ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ನನ್ನ ಕಾರನ್ನು ಅಡ್ಡಗಟ್ಟಿ, ಗಾಜನ್ನು ಒಡೆಯಲು ಯತ್ನಿಸಿದ್ರು. ಈ ವೇಳೆ ನಾನು ಹೇಗೋ ಅಲ್ಲಿಂದ ತಪ್ಪಿಸಿಕೊಂಡು ಬಂದೆ. ನಂತರ ನನ್ನ ಸೆಕ್ಯೂರಿಟಿ ಗಾರ್ಡ್​​ಗಳು ಅವರಿಬ್ಬರನ್ನು ಹಿಡಿದುಕೊಂಡರು.  ನಂತರ ಅವರು ನನ್ನ  ಮೇಲೆ ದಾಳಿ ನಡೆಸಲು ಬಂದಿದ್ದ ಕಾಂಗ್ರೆಸ್ ಕಾರ್ಯಕರ್ತರು ಎಂದು ತಿಳಿಯಿತು ಎಂದಿದ್ದಾರೆ.

ಸೋನಿಯಾ ಗಾಂಧಿಯವರೇ.. ನೀವು ಈ ದೇಶದ ದೊಡ್ಡ ಹೇಡಿ.. ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಲಾಗದೇ ಹಲ್ಲೆ ನಡೆಸಲು ಯೋಚಿಸ್ತೀರಾ..? ಅಂತ ಕಿಡಿಕಾರಿದ್ದಾರೆ. ಜೊತೆಗೆ ನನಗೆ ಏನಾದ್ರು ಆದ್ರೆ ಸೋನಿಯಾ ಗಾಂಧಿಯೇ ಕಾರಣ..ವಾದ್ರಾ ಕುಟುಂಬವೇ ಕಾರಣ ಎಂದು ಹೇಳಿದ್ದಾರೆ.

ಈ ಸಂಬಂಧ ಅರ್ನಬ್ ಗೋಸ್ವಾಮಿ ಎನ್​ಎಂ ಜೋಶಿ ಮಾರ್ಗ್​​ ಪೊಲೀಸ್ ಠಾಣೆಗೆ ಲಿಖಿತ ದೂರು ನೀಡಿದ್ದಾರೆ. ಘಟನೆ ಸಂಬಂಧ ಈಗಾಗಲೇ ಪೊಲೀಸರು ಇಬ್ಬರು ಆರೋಪಿಗಳನ್ನು ಅರೆಸ್ಟ್ ಮಾಡಿ, ಎಫ್​ಐಆರ್ ದಾಖಲಿಸಿದ್ದಾರೆ.

-masthmagaa.com

Contact Us for Advertisement

Leave a Reply