masthmagaa.com:
ಆಗಸ್ಟ್ 29 ಮತ್ತು 30ರ ಮಧ್ಯರಾತ್ರಿ ವಾಸ್ತವ ನಿಯಂತ್ರಣ ರೇಖೆ (LAC) ಬಳಿ ಭಾರತೀಯ ಸೇನೆ ನಡೆಸಿದ ಯಶಸ್ವಿ ಕಾರ್ಯಾಚರಣೆಯಿಂದ ಚೀನಾ ಅಧ್ಯಕ್ಷ ಷಿ ಜಿನ್ಪಿಂಗ್ ಕೆಂಡಾಮಂಡಲರಾಗಿದ್ದಾರೆ ಅಂತ ವರದಿಯಾಗಿದೆ.
ಅಂದು ರಾತ್ರಿ ಪ್ಯಾಂಗಾಂಗ್ ಸೋ ಸರೋವರದ ದಕ್ಷಿಣ ಭಾಗ ಮತ್ತು ಲೇಕ್ ಸ್ಪ್ಯಾಂಗೂರ್ ಭಾಗದಲ್ಲಿನ ಎತ್ತರದ ಪ್ರದೇಶಗಳನ್ನ ಚೀನಾ ಸೈನಿಕರಿಗಿಂತ ಮೊದಲೇ ತೆರಳಿ ಭಾರತೀಯ ಸೈನಿಕರು ವಶಕ್ಕೆ ಪಡೆದಿದ್ದರು. ಈ ವೇಳೆ ಉಭಯ ದೇಶಗಳ ಸೈನಿಕರ ನಡುವೆ ಘರ್ಷಣೆ ನಡೆಯುವುದನ್ನು ತಪ್ಪಿಸಲು ಚೀನಾದ ಸ್ಥಳೀಯ ಸೇನಾ ನಾಯಕರು ತಮ್ಮ ಸೇನೆಯನ್ನು ಹಿಂದಕ್ಕೆ ಕರೆಸಿಕೊಂಡಿದ್ದರು. ಪೀಪಲ್ಸ್ ಲಿಬರೇಷನ್ ಆರ್ಮಿಯ (PLA) ಈ ವೈಫಲ್ಯ ಚೀನಾ ಅಧ್ಯಕ್ಷ ಜಿನ್ಪಿಂಗ್ ಅವರನ್ನ ಕೆರಳಿಸಿದೆ ಎನ್ನಲಾಗ್ತಿದೆ.
ಇದುವರೆಗೆ ಗಡಿ ಭಾಗದಲ್ಲಿ ಚೀನಾವೇ ಏನಾದರೂ ಕಿತಾಪತಿ ಮಾಡುತ್ತಿತ್ತು, ಅದಕ್ಕೆ ಭಾರತ ಪ್ರತಿಕ್ರಿಯೆ ನೀಡುತ್ತಿತ್ತು. ಆದ್ರೆ ಈ ಬಾರಿ ಭಾರತವೇ ಒಂದು ಹೆಜ್ಜೆ ಮುಂದೆ ಇಟ್ಟಿರೋದು ಚೀನಾಗೆ ದೊಡ್ಡ ಆಘಾತ ಕೊಟ್ಟಂತಾಗಿದೆ.
-masthmagaa.com
Contact Us for Advertisement