masthmagaa.com:
ಮಹಾರಾಷ್ಟ್ರ: ರಿಪಬ್ಲಿಕ್ ಟಿವಿಯ ಅರ್ನಬ್ ಗೋಸ್ವಾಮಿಯವರಿಗೆ ಬಂಧನಕ್ಕೆ ಒಳಗಾಗಿದ್ದಾಗ ಮೊಬೈಲ್ ಯೂಸ್ ಮಾಡಲು ಅನುವು ಮಾಡಿಕೊಟ್ಟಿದ್ದ ಅಲಿಬಾಗ್ ಜಿಲ್ಲಾ ನ್ಯಾಯಾಲಯದ ಸೂಪರಿಂಟೆಂಡೆಂಟ್ ಅಂಬಾದಾಸ್ ಪಾಟೀಲ್ ಅವರನ್ನು ಅಮಾನತು ಮಾಡಲಾಗಿದೆ.
2020ರ ನವೆಂಬರ್ 5ರಂದು ಬಂಧಿತ ಅರ್ನಬ್ ಗೋಸ್ವಾಮಿಯವರನ್ನು ಅಲಿಬಾಗ್ ಸಿವಿಕ್ ಸ್ಕೂಲ್ನಲ್ಲಿ ಕ್ವಾರಂಟೈನ್ಗೆ ಒಳಪಡಿಸಲಾಗಿತ್ತು. ಈ ವೇಳೆ ಅಂಬಾದಾಸ್ ಪಾಟೀಲ್ ಅರ್ನಬ್ ಗೋಸ್ವಾಮಿಯವರಿಗೆ ತಮ್ಮ ಮೊಬೈಲ್ ನೀಡಿರೋದು ತನಿಖೆಯಲ್ಲಿ ಗೊತ್ತಾಗಿದೆ. 2 ನಿಮಿಷದವರೆಗೆ ಅರ್ನಬ್ ಗೋಸ್ವಾಮಿ ಮೊಬೈಲ್ ಮೂಲಕ ಹೊರಗಿನವರೊಂದಿಗೆ ಮಾತನಾಡಿದ್ದಾರೆ ಅನ್ನೋದು ಫೋನ್ ಕಾಲ್ ಡೇಟಾದಲ್ಲಿ ಬಹಿರಂಗವಾಗಿದೆ. ಹೀಗಾಗಿ ಅಂಬಾದಾಸ್ ಪಾಟೀಲ್ ಅವರನ್ನು ಸಸ್ಪೆಂಡ್ ಮಾಡಲಾಗಿದೆ.
-masthmagaa.com
Contact Us for Advertisement