ಅರ್ನಬ್​​ಗೆ ಮೊಬೈಲ್ ಕೊಟ್ಟ ಜೈಲಾಧಿಕಾರಿ ಸಸ್ಪೆಂಡ್!

masthmagaa.com:

ಮಹಾರಾಷ್ಟ್ರ: ರಿಪಬ್ಲಿಕ್ ಟಿವಿಯ ಅರ್ನಬ್ ಗೋಸ್ವಾಮಿಯವರಿಗೆ ಬಂಧನಕ್ಕೆ ಒಳಗಾಗಿದ್ದಾಗ ಮೊಬೈಲ್ ಯೂಸ್ ಮಾಡಲು ಅನುವು ಮಾಡಿಕೊಟ್ಟಿದ್ದ ಅಲಿಬಾಗ್ ಜಿಲ್ಲಾ ನ್ಯಾಯಾಲಯದ ಸೂಪರಿಂಟೆಂಡೆಂಟ್​​ ಅಂಬಾದಾಸ್ ಪಾಟೀಲ್ ಅವರನ್ನು ಅಮಾನತು ಮಾಡಲಾಗಿದೆ.

2020ರ ನವೆಂಬರ್ 5ರಂದು ಬಂಧಿತ ಅರ್ನಬ್ ಗೋಸ್ವಾಮಿಯವರನ್ನು ಅಲಿಬಾಗ್​​​ ಸಿವಿಕ್​​ ಸ್ಕೂಲ್​​ನಲ್ಲಿ ಕ್ವಾರಂಟೈನ್​​ಗೆ ಒಳಪಡಿಸಲಾಗಿತ್ತು. ಈ ವೇಳೆ ಅಂಬಾದಾಸ್ ಪಾಟೀಲ್ ಅರ್ನಬ್ ಗೋಸ್ವಾಮಿಯವರಿಗೆ ತಮ್ಮ ಮೊಬೈಲ್ ನೀಡಿರೋದು ತನಿಖೆಯಲ್ಲಿ ಗೊತ್ತಾಗಿದೆ. 2 ನಿಮಿಷದವರೆಗೆ ಅರ್ನಬ್ ಗೋಸ್ವಾಮಿ ಮೊಬೈಲ್ ಮೂಲಕ ಹೊರಗಿನವರೊಂದಿಗೆ ಮಾತನಾಡಿದ್ದಾರೆ ಅನ್ನೋದು ಫೋನ್ ಕಾಲ್ ಡೇಟಾದಲ್ಲಿ ಬಹಿರಂಗವಾಗಿದೆ. ಹೀಗಾಗಿ ಅಂಬಾದಾಸ್ ಪಾಟೀಲ್ ಅವರನ್ನು ಸಸ್ಪೆಂಡ್ ಮಾಡಲಾಗಿದೆ.

-masthmagaa.com

Contact Us for Advertisement

Leave a Reply