masthmagaa.com:
ಭ್ರಷ್ಟಾಚಾರ ಕೇಸಲ್ಲಿ ಬಂಧಿತವಾಗಿರೋ ಶಾಸಕ ಮಾಡಾಳ್ ವಿರೂಪಾಕ್ಷಪ್ಪರನ್ನ 5 ದಿನಗಳ ಕಾಲ ಲೋಕಾಯುಕ್ತ ಕಸ್ಟಡಿಗೆ ನೀಡಿ ಜನಪ್ರತಿನಿಧಿಗಳ ನ್ಯಾಯಾಲಯ ಆದೇಶ ಕೊಟ್ಟಿದೆ. ಮಗನ ಮನೆಯಲ್ಲಿ ಕೋಟಿ ಕೋಟಿ ಹಣ ಪತ್ತೆ ಕೇಸಲ್ಲಿ ಮಾಡಾಳ್ಗೆ ಕೊಟ್ಟಿದ್ದ ಜಾಮೀನನ್ನ ನಿನ್ನೆ ಹೈಕೋರ್ಟ್ ವಜಾ ಮಾಡಿತ್ತು. ಬಳಿಕ ದಾರಿಯಲ್ಲೇ ಹೋಗ್ತಿದ್ದ ಶಾಸಕರನ್ನ ನಿಲ್ಲಿಸಿ ಅಡ್ಡಗಟ್ಟಿ ಅರೆಸ್ಟ್ ಮಾಡಲಾಗಿತ್ತು. ಬಳಿಕ ಕೋರ್ಟ್ಗೆ ಪ್ರೊಡ್ಯೂಸ್ ಮಾಡಲಾಗಿತ್ತು. ಈಗ ಮಾನ್ಯ ಶಾಸಕರನ್ನ ಕೋರ್ಟ್ 5 ದಿನಗಳ ಕಾಲ ಲೋಕಾಯುಕ್ತಕ್ಕೆ ಒಪ್ಪಿಸಿದೆ. ಇನ್ನೊಂದ್ಕಡೆ ಹೊನ್ನಾಳಿ ಬಿಜೆಪಿ ಶಾಸಕ ಎಂಪಿ ರೇಣುಕಾಚಾರ್ಯ ಅವರ ಅಕ್ರಮ ಆಸ್ತಿ ಗಳಿಕೆಗೆ ಸಂಬಂಧಿಸಿದಂತೆ, ಪ್ರಕರಣವನ್ನ ರದ್ದು ಮಾಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನ ಹೈ ಕೋರ್ಟ್ ವಜಾಗೊಳಿಸಿದೆ.
-masthmagaa.com
Contact Us for Advertisement