masthmagaa.com:

ಬೆಂಗಳೂರಿನ ಆರ್​.ಆರ್. ನಗರ ಮತ್ತು ತುಮಕೂರಿನ ಸಿರಾ ಉಪ ಚುನಾವಣೆಗೆ ದಿನಗಳು ಹತ್ತಿರವಾಗ್ತಿದ್ದಂತೇ ರಾಜಕೀಯ ನಾಯಕರ ಆರೋಪ-ಪ್ರತ್ಯಾರೋಪ ಕೂಡ ಜಾಸ್ತಿಯಾಗಿದೆ. ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್​ ಅಂತೂ ‘ಉಪ ಚುನಾವಣೆ ಪಾರದರ್ಶಕವಾಗಿ, ನ್ಯಾಯಸಮ್ಮತವಾಗಿ ನಡೆಯೋದು ಅನುಮಾನ. ಬಿಜೆಪಿ ಈಗಾಗಲೇ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು ಆರ್​.ಆರ್​.ನಗರದಲ್ಲಿ ಹಣ ಮತ್ತು ಸೆಟ್​​ಟಾಪ್ ಬಾಕ್ಸ್​ಗಳನ್ನ ವಿತರಣೆ ಮಾಡ್ತಿದೆ. ಆದ್ರೂ ಚುನಾವಣಾ ಆಯೋಗ ಸುಮ್ಮನಿದೆ’ ಅಂತ ಆರೋಪಿಸಿದ್ದಾರೆ.

ಇದಕ್ಕೆ ತಿರುಗೇಟು ಕೊಟ್ಟಿರುವ ಸಚಿವ ಡಾ. ಕೆ. ಸುಧಾಕರ್, ‘ಮತದಾನಕ್ಕೆ ಇನ್ನೂ ಒಂದು ವಾರ ಇರುವಾಗಲೇ ಸೋಲಿಗೆ ನೆಪಗಳನ್ನ ಹುಡುಕುತ್ತಿರುವ ಕಾಂಗ್ರೆಸ್ ನಾಯಕರನ್ನು ನೋಡಿದ್ರೆ ಯುದ್ಧಕ್ಕೆ ಮುಂಚೆಯೇ ಶಸ್ತ್ರತ್ಯಾಗ ಮಾಡಿದಂತಿದೆ. ಕಾಂಗ್ರೆಸ್ ಪಕ್ಷವನ್ನು ಮತದಾರರು ತಿರಸ್ಕರಿಸಿದ್ದು ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲುತ್ತೆ’ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply