masthmagaa.com:
ಇತ್ತೀಚೆಗಷ್ಟೇ ಇಂಡಿಯನ್ ಯುನಿಯನ್ ಮುಸ್ಲಿಂ ಲೀಗ್ನ (IUML) ಕೇರಳದ ಮುಖ್ಯಸ್ಥ ಶ್ರೀರಾಮಮಂದಿರ ವಿಚಾರವಾಗಿ ಬೆಂಬಲ ಸೂಚಿಸಿ ನೀಡಿರೋ ಹೇಳಿಕೆ ನೀಡಿದ್ರು. ಇದೀಗ ಈ ಬಗ್ಗೆ ವ್ಯಾಪಲ ವಿರೋಧ ವ್ಯಕ್ತವಾಗಿದೆ. RSS ಅಜೆಂಡಾಗಳನ್ನ ಸಮರ್ಥನೆ ಮಾಡೋದು ಸರಿಯಲ್ಲ ಅಂತ ಇಂಡಿಯನ್ ನ್ಯಾಷನಲ್ ಲೀಗ್ (INL) ರಿಯಾಕ್ಟ್ ಮಾಡಿದೆ. ಅಂದ್ಹಾಗೆ IUML ಕೇರಳ ಮುಖ್ಯಸ್ಥ ಸಯ್ಯದ್ ಸಾದಿಕ್ ಅಲಿ ಶಿಹಾಬ್ ತಂಗಲ್, ʻರಾಮಮಂದಿರ ಹಿಂದೂ ಸಮುದಾಯಕ್ಕೆ ಬಹಳ ಇಂಪಾರ್ಟೆಂಟ್ ಆಗಿದೆ. ಈ ವಿರುದ್ಧ ಪ್ರತಿಭಟನೆ ನಡೆಸೋದು ಸರಿಯಲ್ಲ, ಮುಸ್ಲಿಂರು ಇದನ್ನ ಅರ್ಥ ಮಾಡ್ಕೊಬೇಕುʼ ಅಂತೇಳಿದ್ರು. ಇದೀಗ ಇವ್ರ ಹೇಳಿಕೆ ವಿರುದ್ಧ ಗುಡುಗಿರೋ INL, ʻಮುಸ್ಲಿಂರ ಹಕ್ಕುಗಳನ್ನ ರಕ್ಷಿಸ್ಬೇಕಾದ IUML ಮುಖ್ಯಸ್ಥ, ಈ ರೀತಿ ಹೇಳಿಕೆ ನೀಡೋದು ಸರಿಯಲ್ಲ. ಮಹಾತ್ಮ ಗಾಂಧಿಯವ್ರ ರಾಮ ರಾಜ್ಯಕ್ಕೂ, RSSನ ರಾಮ ರಾಜ್ಯಕ್ಕೂ ಅಜಗಜಾಂತರ ವ್ಯತ್ಯಾಸವಿದೆʼ ಅಂದಿದೆ.
-masthmagaa.com
Contact Us for Advertisement