masthmagaa.com:
ದೆಹಲಿ: ದಿನಕ್ಕೆ 2 ಗಂಟೆ ಹಸಿರು ಪಟಾಕಿ ಸಿಡಿಸಲು ಅನುಮತಿ ನೀಡಿರುವ ಎನ್ಜಿಟಿ ಅಂದ್ರೆ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದ ಆದೇಶವನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿದೆ. ಈ ಹಿಂದೆ ಎನ್ಜಿಟಿ ದಿನಕ್ಕೆ 2 ಗಂಟೆ ಹಸಿರು ಪಟಾಕಿ ಸಿಡಿಸಲು ಅನುಮತಿ ನೀಡಿತ್ತು. ಆದ್ರೆ ತೆಲಂಗಾಣ ಹೈಕೋರ್ಟ್ ಪಟಾಕಿ ಮೇಲೆ ಸಂಪೂರ್ಣ ನಿಷೇಧ ಹೇರಿತ್ತು. ಇದನ್ನು ಪ್ರಶ್ನಿಸಿ ತೆಲಂಗಾಣದ ಪಟಾಕಿ ವ್ಯಾಪಾರಿಗಳ ಒಕ್ಕೂಟ ಸುಪ್ರೀಂಕೋರ್ಟ್ ಮೊರೆಹೋಗಿತ್ತು. ಎನ್ಜಿಟಿ ದಿನಕ್ಕೆ 2 ಗಂಟೆ ಹಸಿರು ಪಟಾಕಿ ಸಿಡಿಸಲು ಅವಕಾಶ ನೀಡಿದ್ರೂ, ಹೈಕೋರ್ಟ್ ಅವಕಾಶ ನೀಡ್ತಿಲ್ಲ ಅಂತ ಅರ್ಜಿ ಸಲ್ಲಿಸಿತ್ತು. ಅದರಂತೆ ಎನ್ಜಿಟಿ ಆದೇಶವನ್ನು ಎತ್ತಿ ಹಿಡಿದ ಸುಪ್ರೀಂಕೋರ್ಟ್, ತೆಲಂಗಾಣ ಹೈಕೋರ್ಟ್ ಆದೇಶದಲ್ಲಿ ಮಾರ್ಪಾಡು ಮಾಡಿದೆ. ಅಲ್ಲದೆ ದೀಪಾವಳಿ, ಕ್ರಿಸ್ಮಸ್, ಹೊಸ ವರ್ಷ ಸೇರಿದಂತೆ ಇನ್ನು ಕೆಲ ಹಬ್ಬಗಳಿಗೆ ಈ ವಿನಾಯಿತಿ ನೀಡಲಾಗಿದೆ.
ಕರ್ನಾಟಕದಲ್ಲೂ ಈಗಾಗಲೇ ಪಟಾಕಿ ಬ್ಯಾನ್ ಮಾಡಲಾಗಿದ್ದು, ಹಸಿರು ಪಟಾಕಿಗೆ ಅವಕಾಶ ನೀಡಲಾಗಿದೆ. ಆದ್ರೆ ಇಂತಿಷ್ಟು ಸಮಯ ಮಾತ್ರವೇ ಪಟಾಕಿ ಹೊಡೆಯಬೇಕು ಅಂತ ಆದೇಶಿಸಿಲ್ಲ. ಹೀಗಾಗಿ ರಾಜ್ಯದ ಜನ ಹಸಿರು ಪಟಾಕಿಯನ್ನು ಇಡೀ ದಿನ ಹೊಡೆಯಬಹುದಾ..? ಅಥವಾ ಸುಪ್ರೀಂಕೋರ್ಟ್ ಆದೇಶದಂತೆ ಟೈಮಿಂಗ್ಸ್ ಪ್ರಕಾರ ಹೊಡೆಯಬೇಕಾ ಅನ್ನೋ ಗೊಂದಲ ಶುರುವಾಗಿದೆ.
ಹಸಿರು ಪಟಾಕಿ ಅಂದ್ರೆ ಏನು..?
ಹಸಿರು ಪಟಾಕಿ ಅಂದ್ರೆ ಅಲ್ಯುಮೀನಿಯಂ, ಬೇರಿಯಂ, ಪೊಟ್ಯಾಶಿಯಂ ನೈಟ್ರೇಟ್ ಮತ್ತು ಕಾರ್ಬನ್ ಮುಂತಾದ ಹಾನಿಕಾರಕ ರಾಸಾಯನಿಕಗಳನ್ನ ಬಳಸದೇ ತಯಾರಿಸಿದ ಪಟಾಕಿಗಳು. ಹಸಿರು ಪಟಾಕಿಗಳ ಬಳಕೆಯಿಂದ ವಾಯು ಮಾಲಿನ್ಯವನ್ನು ಶೇ. 30ರಷ್ಟು ಕಡಿಮೆ ಮಾಡಬಹುದು.. ಆದ್ರೆ ಇದರ ಶಬ್ದ ಮತ್ತು ಬೆಳಕಿನಲ್ಲಿ ಯಾವುದೇ ವ್ಯತ್ಯಾಸ ಇರೋದಿಲ್ಲ.
-masthmagaa.com
Contact Us for Advertisement