masthmagaa.com:
ದೇಶದ 21 ಮಂದಿ ನಿವೃತ್ತ ನ್ಯಾಯಾಧೀಶರು, ದೇಶದ ನ್ಯಾಯಾಂಗದಲ್ಲಿ ರಾಜಕೀಯದ ಹಸ್ತಕ್ಷೇಪ ಆಗ್ತಿದೆ ಅಂತ CJI ಡಿವೈ ಚಂದ್ರಚೂಡ್ ಅವ್ರಿಗೆ ಪತ್ರ ಬರೆದಿದ್ದಾರೆ. ಇದ್ರಲ್ಲಿ, ʻಕೆಲವು ಗುಂಪುಗಳು ತಮ್ಮ ರಾಜಕೀಯ ಪ್ರಭಾವ ಬಳಸಿ ನ್ಯಾಯಾಂಗದ ಮೇಲೆ ಒತ್ತಡ ಹಾಕ್ತಿದ್ದಾರೆ. ತಪ್ಪಾದ ಮಾಹಿತಿಗಳನ್ನ ಬಿತ್ತೋದು ಹಾಗೂ ಸಾರ್ವಜನಿಕವಾಗಿ ಅವಹೇಳನ ಮಾಡೋದ್ರ ಮೂಲಕ, ಒತ್ತಡ ಹಾಕೋಕೆ ಪ್ರಯತ್ನ ಪಡ್ತಿದ್ದಾರೆ. ಈ ರೀತಿಯ ಪ್ರಯತ್ನಗಳು ಜಾಸ್ತಿಯಾಗ್ತಿವೆ. ಅವರವರ ರಾಜಕೀಯ ಹಿತಾಸಕ್ತಿ ಹಾಗೂ ವೈಯಕ್ತಿಕ ಲಾಭಕ್ಕೋಸ್ಕರ ನಡೀತಿರೋ ಈ ಅಂಶಗಳು, ದೇಶದ ನ್ಯಾಯಾಂಗದ ಮೇಲೆ ಜನರಿಗಿರೋ ವಿಶ್ವಾಸವನ್ನ ಕುಗ್ಗಿಸುತ್ತಿವೆʼ ಅಂತ ಹೇಳಿದ್ದಾರೆ. ಪತ್ರ ಬರೆದಿರೋರ ಪೈಕಿ ನಾಲ್ವರು ಸುಪ್ರಿಂ ಕೋರ್ಟ್ನ ನಿವೃತ್ತ ಜಡ್ಜ್ಗಳಾಗಿದ್ದು, ಉಳಿದ 17 ಮಂದಿ ವಿವಿಧ ಹೈಕೋರ್ಟ್ಗಳ ನಿವೃತ್ತ ನ್ಯಾಯಾಧೀಶರಾಗಿದ್ದಾರೆ.
-masthmagaa.com
Contact Us for Advertisement