masthmagaa.com:

ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡೋದಾಗಿ ಪುದುಚೆರಿ ಮಾಜಿ ಸಿಎಂ ವಿ. ನಾರಾಯಣಸ್ವಾಮಿ ಎಚ್ಚರಿಸಿದ್ದಾರೆ. ಇದಕ್ಕೆ ಕಾರಣವೇನು ಗೊತ್ತಾ? ವಿಧಾನಸಭೆ ಚುನಾವಣೆ ನಡೆಯಲಿರೋ ಪುದುಚೆರಿಯಲ್ಲಿ ಇತ್ತೀಚೆಗೆ ಪ್ರಚಾರ ಮಾಡೋವಾಗ ಅಮಿತ್ ಶಾ ಆರೋಪವೊಂದನ್ನ ಮಾಡಿದ್ರು. ಕೇಂದ್ರ ಸರ್ಕಾರ ಪುದುಚೆರಿಗೆ 15,000 ಕೋಟಿ ರೂಪಾಯಿ ಕಳಿಸಿತ್ತು. ಆದ್ರೆ ಸಿಎಂ ಆಗಿದ್ದ ನಾರಾಯಣಸ್ವಾಮಿ ಅದರಲ್ಲಿ ಒಂದಷ್ಟು ಹಣವನ್ನ ಗಾಂಧಿ ಫ್ಯಾಮಿಲಿಗೆ ಕೊಟ್ಟಿದ್ರು ಅಂತ ಅಮಿತ್ ಶಾ ಹೇಳಿದ್ದರು. ಇದರಿಂದ ಸಿಟ್ಟಾಗಿರೋ ವಿ. ನಾರಾಯಣಸ್ವಾಮಿ, ‘ಇದೊಂದು ಗಂಭೀರ ಆರೋಪ. ಇದನ್ನ ಸಾಬೀತುಪಡಿಸುವಂತೆ ನಾನು ಅಮಿತ್ ಶಾಗೆ ಚಾಲೆಂಜ್ ಹಾಕ್ತೀನಿ. ಒಂದ್ವೇಳೆ ಸಾಬೀತು ಮಾಡಲು ಆಗದಿದ್ರೆ, ಪುದುಚೆರಿ ಮತ್ತು ದೇಶದ ಜನರ ಬಳಿ ಅಮಿತ್ ಶಾ ಕ್ಷಮೆ ಕೇಳಬೇಕು. ಜೊತೆಗೆ ಸಾಬೀತು ಮಾಡಲಿಲ್ಲ ಅಂದ್ರೆ ಅಮಿತ್ ಶಾ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ’ ಎಂದಿದ್ಧಾರೆ.

-masthmagaa.com

Contact Us for Advertisement

Leave a Reply