ಭಯೋತ್ಪಾದನೆಗೆ ಸಹಕರಿಸಲ್ಲ ಅಂತ ಹೇಳುತ್ತಲೇ ಪಾಕಿಸ್ತಾನ ಭಯೋತ್ಪಾದಕರನ್ನು ಸಾಕುವ ತನ್ನ ಬುದ್ಧಿಯನ್ನು ಮುಂದುವರಿಸಿದೆ. ಈ ಹಿಂದೆ ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್ ಮೇಲೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ನಿಷೇಧ ಹೇರಿ, ಬ್ಯಾಂಕ್ ಖಾತೆ ಸೀಜ್ ಮಾಡಿತ್ತು. ಆದ್ರೀಗ ವಿಶ್ವಸಂಸ್ಥೆಗೆ ಪತ್ರ ಬರೆದಿರುವ ಪಾಕಿಸ್ತಾನ ಹಫೀಜ್ ಸಯೀದ್ ಕುಟುಂಬದಲ್ಲಿ ನಾಲ್ವರು ಸದಸ್ಯರಿದ್ದು ಅವರನ್ನು ಸಾಕಬೇಕಾಗಿದೆ. ಹೀಗಾಗಿ ಅವರ ತಿಂಗಳ ಖರ್ಚಿಗೆ ಬೇಕಾಗುವಷ್ಟು ಹಣ ತೆಗೆಯಲು ಅವಕಾಶ ನೀಡಬೇಕೆಂದು ಕೇಳಿಕೊಂಡಿದೆ. ಈ ಬೇಡಿಕೆಗೆ ಯಾವುದೇ ವಿರೋಧ ವ್ಯಕ್ತವಾಗದ ಕಾರಣ, ವಿಶ್ವಸಂಸ್ಥೆಯ ಭದ್ರತಾಮಂಡಳಿ, ತಿಂಗಳಿಗೆ ಒಂದೂವರೆ ಲಕ್ಷ ಅಂದ್ರೆ 1 ಸಾವಿರ ಡಾಲರ್ ಹಣ ಬಳಕೆಗೆ ಅವಕಾಶ ನೀಡಿದೆ. ಕಳೆದ ಆಗಸ್ಟ್ 15ರಂದು ಪಾಕಿಸ್ತಾನ ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಈ ಪತ್ರ ಬರೆದಿತ್ತು ಅಂತ ತಿಳಿದುಬಂದಿದೆ.
Contact Us for Advertisement2019-09-26