ಚುನಾವಣಾ ಆಯೋಗವನ್ನ ವಿಸರ್ಜಿಸಿ, ಅದನ್ನ ಜನರೇ ಆಯ್ಕೆ ಮಾಡಬೇಕು: ಶಿವಸೇನೆ

masthmagaa.com:

ಶಿವಸೇನಾ ಹೆಸರು ಹಾಗೂ ಚಿಹ್ನೆ ಕಾದಾಟ ಮುಂದುವರೆದಿದೆ. ಕೇಂದ್ರ ಚುನಾವಣಾ ಆಯೋಗ ಕೊಟ್ಟ ತೀರ್ಪನ್ನ ಪ್ರಶ್ನಿಸಿ ಉದ್ಧವ್‌ ಠಾಕ್ರೆ ಇಂದು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಜೊತೆಗೆ ಅರ್ಜಿಯ ತುರ್ತು ವಿಚಾರಣೆ ನಡೆಸಬೇಕು ಅಂತ ಠಾಕ್ರೆ ಪರ ವಕೀಲರು ಕೋರಿದ್ದಾರೆ. ಇತ್ತ ಮಾದ್ಯಮಗಳ ಮುಂದೆ ಮಾತನಾಡಿದ ಉದ್ದವ್‌ ಠಾಕ್ರೆ, ಚುನಾವಣಾ ಆಯೋಗವನ್ನು ವಿಸರ್ಜಿಸಿ, ಅದನ್ನ ಜನರಿಂದಲೇ ಆಯ್ಕೆ ಮಾಡಬೇಕು, ರಾವಣನ ಕೈಯಲ್ಲಿ ರಾಮ ಧನಸ್ಸು ಇರಬಾರ್ದು ಅಂತ ಮಹಾರಾಷ್ಟ್ರ ಸಿಎಂ ಏಕನಾಥ್‌ ಶಿಂಧೆ ಅವರನ್ನ ಕುಟುಕಿದ್ದಾರೆ.

-masthmagaa.com

Contact Us for Advertisement

Leave a Reply