masthmagaa.com:
ಭಾರತೀಯ ಸೇನೆಯಲ್ಲಿ ಮುಸ್ಲಿಮರಿಗೆ 30% ಮೀಸಲಾತಿ ನೀಡ್ಬೇಕು ಅಂತ ಬಿಹಾರದ ಜೆಡಿಯು ನಾಯಕ ಗುಲಾಮ್ ರಸೂಲ್ ಬಲ್ಯಾವಿ ಅವ್ರ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವ್ರು ಪಾಕಿಸ್ತಾನ ಉಗ್ರರನ್ನ ಎದುರಿಸೋಕೆ ಭಯ ಪಡ್ತಿದ್ರೆ, 30% ಮುಸ್ಲಿಮರನ್ನ ಸೇನೆಗೆ ಸೇರಿಸಿಕೊಳ್ಬೇಕು. ಪಾಕಿಸ್ತಾನದ ಮಿಸೈಲ್ಗಳಿಗೆ ತಕ್ಕ ಉತ್ತರ ನೀಡಿದ್ದ ಎಪಿಜೆ ಅಬ್ದುಲ್ ಕಲಾಂ ಅವ್ರು ಮುಸ್ಲಿಂ ಅಂತ ಹೇಳಿಕೆ ನೀಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರೋ ಜೆಡಿಯು ಮುಖ್ಯಸ್ಥ ಹಾಗೂ ಬಿಹಾರ ಸಿಎಂ ನಿತೀಶ್ ಕುಮಾರ್, ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜೊತೆಗೆ ಪಕ್ಷವೂ ಕೂಡ ಬಲ್ಯಾವಿ ಅವ್ರ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿದೆ.
-masthmagaa.com
Contact Us for Advertisement