ಸರ್ವಪಕ್ಷಗಳ ಸಭೆ ಕರೆದ ಕೆಂದ್ರ ಸರ್ಕಾರ! ಯಾಕೆ?

masthmagaa.com:

ಜಿ20 ದೇಶಗಳ ಶೃಂಗಸಭೆಯ ಅಧ್ಯಕ್ಷತೆಯನ್ನ ಭಾರತ ಅಧಿಕೃತವಾಗಿ ವಹಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಸಭೆ ಆಯೋಜನೆ ಬಗ್ಗೆ ಸಲಹೆಗಳನ್ನ ಪಡೆಯೋಕೆ ಕೇಂದ್ರ ಸರ್ಕಾರ ಸರ್ವಪಕ್ಷಗಳ ಸಭೆ ಕರೆದಿದೆ. ನಾಳೆ ಎಲ್ಲಾ ಪಕ್ಷಗಳ ಜೊತೆ ಮೀಟಿಂಗ್‌ ಮಾಡಲಾಗುತ್ತೆ. ಸುಮಾರು 40 ಪಕ್ಷಗಳ ನಾಯಕರನ್ನ ಆಹ್ವಾನಿಸಲಾಗಿದೆ ಅಂತ ಸಂಸದೀಯ ಸಚಿವ ಪ್ರಹ್ಲಾದ್‌ ಜೋಶಿ ಹೇಳಿದ್ದಾರೆ. ರಾಷ್ಟ್ರಪತಿ ಭವನದಲ್ಲಿ ನಡೆಯಲಿರೋ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಇರಲಿದ್ದು, ವಿದೇಶಾಂಗ ಸಚಿವ ಎಸ್‌ ಜೈಶಂಕರ್‌ ಅಟೆಂಡ್‌ ಮಾಡೋ ಸಾಧ್ಯತೆ ಇದೆ ಎನ್ನಲಾಗಿದೆ. ಅಂದ್ಹಾಗೆ ಭಾರತ 2023ರ ಸೆಪ್ಟೆಂಬರ್‌ 9 ಮತ್ತು 10ರಂದು ಜಿ20 ಸಭೆ ಆಯೋಜಿಸಲಿದೆ.

-masthmagaa.com

Contact Us for Advertisement

Leave a Reply