ದೇಶಕ್ಕೆ ಬಾಬಾ ಮೋದಿ ಬೇಕಿಲ್ಲ, ದೇಶಕ್ಕೆ ಧರ್ಮ ಇಲ್ಲ: ಓವೈಸಿ!

masthmagaa.com:

ರಾಜ್ಯಸಭೆಯ ಸಮಾರೋಪ ಸದನಲ್ಲಿ AIMIM ಸಂಸದ ಅಸಾದುದ್ದಿನ್‌ ಓವೈಸಿ ಮೋದಿ ಸರ್ಕಾರದ ವಿರುದ್ದ ಗುಡುಗಿದ್ದಾರೆ. ರಾಮ ಮಂದಿರದ ಪ್ರಾಣ ಪ್ರತಿಷ್ಠಾಪಣೆ ವಿಷಯದ ಚರ್ಚೆ ವೇಳೆ ಓವೈಸಿ ಬಿಜೆಪಿಯನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ದೇಶಕ್ಕೆ ಬಾಬಾ ಮೋದಿ ಬೇಕಿಲ್ಲ. ನಾನು ಈ ದೇಶಕ್ಕೆ ಧರ್ಮವಿಲ್ಲ ಅಂತ ನಂಬಿದ್ದೇನೆ. ಆದ್ರೆ ಬಿಜೆಪಿ ಸರ್ಕಾರ ಒಂದು ಒಂದು ಸಮುದಾಯದ ಅಥ್ವಾ ಒಂದು ಧರ್ಮಕ್ಕೆ ಸೇರಿದ ಸರ್ಕಾರದ ತರ ವರ್ತಿಸ್ತಿದೆ. ಈ ಸರ್ಕಾರ ರಾಮಮಂದಿರ ಕಾರ್ಯಕ್ರಮದ ಮೂಲಕ ಒಂದು ಧರ್ಮದ ವಿರುದ್ದ ಇನ್ನೊಂದು ಧರ್ಮ ಜಯಗಳಿಸಿದಂತೆ ಸಂದೇಶ ನೀಡಿದೆ. ಹಾಗೆ ಮಾಡಿ ನೀವು ದೇಶದ 17 ಕೋಟಿ ಮುಸ್ಲಿಮರಿಗೆ ಯಾವ ಮೇಸೆಜ್‌ ನೀಡ್ತಿದ್ದಿರಿ? ಅಂತ ಪ್ರಶ್ನಿಸಿದ್ದಾರೆ. ಅಲ್ದೇ ನಾನು ಬಾಬರ್‌, ಜಿನ್ನಾ ಅಥ್ವಾ ಔರಂಗಜೇಬನ ವಕ್ತಾರನಾ? ನಾನು ಶ್ರೀರಾಮರನ್ನ ಗೌರವಿಸ್ತೀನಿ. ಆದ್ರೆ ಸಾಯುವಾಗ ʻಹೇ ರಾಮ್‌ʼ ಅಂದ ಗಾಂಧಿಜಿಯನ್ನ ಕೊಂದ ಗೋಡ್ಸೆಯನ್ನ ದ್ವೇಷಿಸ್ತಿನಿ ಅಂತೇಳಿದ್ದಾರೆ.

-masthmagaa.com

Contact Us for Advertisement

Leave a Reply