masthmagaa.com:
ಸದ್ಯ ʻದೆಹಲಿ ಚಲೋʼ ಪ್ರತಿಭಟನೆಯನ್ನ ಸ್ಥಗಿತಗೊಳಿಸಿರೋ ರೈತ ಒಕ್ಕೂಟಗಳು ಇದೀಗ ಪಂಜಾಬ್ನ ಖನೌರಿ ಮತ್ತು ಶಂಭು ಗಡಿಯಲ್ಲಿ ಕ್ಯಾಂಡೆಲ್ ಮೆರವಣಿಗೆ ನಡೆಸಿವೆ. ಈ ವೇಳೆ ಪ್ರತಿಭಟನೆಯಲ್ಲಿ ಮೃತಪಟ್ಟ ಯುವ ರೈತ ಶುಭ್ಕರಣ್ ಸಿಂಗ್ ಸೇರಿ ಉಳಿದ ಮೃತ ರೈತರಿಗೆ ಶ್ರದ್ಧಾಂಜಲಿ ಸಲ್ಲಿಸಲಾಗಿದೆ. ಇನ್ನು ರೈತರ ಪ್ರತಿಭಟನೆಯಿಂದಾಗಿ ಎರಡು ವಾರಗಳ ಹಿಂದೆ ಹರಿಯಾಣದ 7 ಜಿಲ್ಲೆಗಳಲ್ಲಿ ಮೊಬೈಲ್ ಇಂಟರ್ನೆಟ್ ಸೇವೆ ಶಟ್ಡೌನ್ ಮಾಡಲಾಗಿತ್ತು. ಈಗದನ್ನ ಪುನಃಸ್ಥಾಪಿಸಲಾಗಿದೆ. ಅಂದ್ಹಾಗೆ ಫೆಬ್ರುವರಿ 11 ರಂದು ಹರಿಯಾಣದ ಕೆಲ ಜಿಲ್ಲೆಗಳಲ್ಲಿ ಇಂಟರ್ನೆಟ್ ಸರ್ವೀಸ್ ತಾತ್ಕಾಲಿಕವಾಗಿ ಬ್ಯಾನ್ ಮಾಡಲಾಗಿತ್ತು.
-masthmagaa.com
Contact Us for Advertisement