masthmagaa.com:
ʻದೆಹಲಿ ಚಲೋʼ ರೈತರ ಪ್ರತಿಭಟನೆ ವಿಚಾರವಾಗಿ ಇದೀಗ ಹರಿಯಾಣ ಪೊಲೀಸ್ ಹೊಸ ಕ್ರಮ ತೆಗೆದ್ಕೊಳ್ಳೋಕೆ ಮುಂದಾಗಿದ್ದಾರೆ. ಯಾರೆಲ್ಲಾ ಈ ಪ್ರತಿಭಟನೆಯಲ್ಲಿ ಭಾಗಿಯಾಗಿ ಹಿಂಸಾಚಾರ ನಡೆಸ್ತಾರೋ, ಅವ್ರ ವೀಸಾ ಮತ್ತು ಪಾಸ್ಪೋರ್ಟ್ನ್ನ ಕ್ಯಾನ್ಸೆಲ್ ಮಾಡಿಸೋದಾಗಿ ಎಚ್ಚರಿಕೆ ನೀಡಿದ್ದಾರೆ. ಅಷ್ಟೇ ಅಲ್ದೇ ʻಪಂಜಾಬ್ ಮತ್ತು ಹರಿಯಾಣದಿಂದ ಬರೋ ಪ್ರತಿಭಟನಾಕಾರರು ರೈತರ ಪ್ರತಿಭಟನೆ ಅಂತ ಹೇಳಿ ಹಿಂಸಾಚಾರ ನಡೆಸಿರೋದು ಗೊತ್ತಾಗಿದೆ. ಅವ್ರನ್ನ ಗುರುತಿಸಲಾಗಿದೆʼ ಅಂತ ಪೊಲೀಸರು ಹೇಳಿದ್ದಾರೆ.
-masthmagaa.com
Contact Us for Advertisement