ಬೊಮ್ಮಾಯಿ ಬಜೆಟ್‌ಗೆ ಎಳ್ಳು ನೀರು ಬಿಟ್ಟ ಕಾಂಗ್ರೆಸ್!‌

masthmagaa.com:

2023-24ನೇ ಸಾಲಿನ ಬಜೆಟ್‌ ನಿನ್ನೆ ಮಂಡನೆಯಾಗಿದ್ದು, ಕಾಂಗ್ರೆಸ್ ನಾಯಕರು ಬೊಮ್ಮಾಯಿ ಬಜೆಟ್‌ನ್ನ ವಿನೂತನವಾಗಿ ವಿರೋಧಿಸ್ತಿದ್ದಾರೆ. ನಿನ್ನೆ ಸದನದಲ್ಲೇ. ಕಿವಿಯಲ್ಲಿ ಹೂ ಇಡ್ಕೊಂಡು ವ್ಯಂಗ್ಯವಾಡಿದ್ರು. ಇಂದು ಮೈಸೂರಿನಲ್ಲಿ ಬೊಮ್ಮಾಯಿ ಬಜೆಟ್‌ಗೆ ತರ್ಪಣ ಬಿಟ್ಟು ವಿಭಿನ್ನ ರೀತಿಯಲ್ಲಿ ಸರ್ಕಾರದ ವಿರುದ್ದ ಆಕ್ರೋಶ ಹೊರಹಾಕಿದ್ದಾರೆ. ಕೆಪಿಸಿಸಿ ವಕ್ತಾರ ಎಂ ಲಕ್ಷಣ್‌ ನೇತೃತ್ವದಲ್ಲಿ ಬಜೆಟ್‌ ಪ್ರತಿಗೆ ಎಳ್ಳು ನೀರು ಬಿಡಲಾಗಿದೆ. ಇತ್ತ ಹುಬ್ಬಳ್ಳಿಯಲ್ಲಿ ಪೇ ಸಿಎಂ ಮಾದರಿಯಲ್ಲಿ ವಿಭಿನ್ನ ಅಭಿಯಾನವನ್ನ ಕಾಂಗ್ರೆಸ್‌ ಘಟಕ ಆರಂಭಿಸಿದೆ. ಗೋಡೆಗಳ ಮೇಲೆ ಬಿಜೆಪಿಯೇ ಭರವಸೆ ಅನ್ನೋ ಪೋಸ್ಟರ್‌ಗಳ ಪಕ್ಕದಲ್ಲೇ ʻಸಾಕಪ್ಪಾ ಸಾಕು ಕಿವಿ ಮೇಲೆ ಹೂವʼ ಅನ್ನೊ ಪೋಸ್ಟರ್‌ಗಳನ್ನ ಅಂಟಿಸಿ ಕಾಂಗ್ರೆಸ್‌ನವರು ಲೇವಡಿ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply