masthmagaa.com:
ರೈತರ ಪ್ರತಿಭಟನೆ ವಿಚಾರಕ್ಕೆ ಬಂದ್ರೆ, ಪೊಲೀಸರ ಜೊತೆಗಿನ ಘರ್ಷಣೆ ವೇಳೆ ರೈತರೊಬ್ರು ಮೃತಪಟ್ಟಿದ್ದಕ್ಕೆ ಶುಕ್ರವಾರ ಬ್ಲ್ಯಾಕ್ ಡೇ ಅಥವಾ ಬ್ಯಾಕ್ ಫ್ರೈಡೆ ಆಚರಿಸಿದ್ದಾರೆ. ಅಲ್ಲದೆ ಶುಕ್ರವಾರದ ರೈತರ ಮೀಟಿಂಗ್ನಲ್ಲಿ, ದೆಹಲಿ ಚಲೋ ಪ್ರತಿಭಟನೆ ವಿಚಾರವಾಗಿ ಮುಂದಿನ ನಿರ್ಧಾರವನ್ನ ತಗೊಳ್ಳಲಾಗತ್ತೆ ಅಂತ ರೈತಮುಖಂಡರು ಹೇಳಿದ್ದಾರೆ. ಅತ್ತ ಹರ್ಯಾಣ ಪೊಲೀಸರು ಪ್ರತಿಭಟನಾ ನಿರತ ರೈತರ ವಿರುದ್ಧ ನ್ಯಾಷನಲ್ ಸೆಕ್ಯುರಿಟಿ ಆಕ್ಟ್ ಅಪ್ಲೈ ಮಾಡಲ್ಲ ಅಂತೇಳಿದ್ದಾರೆ. ಅಲ್ಲದೆ ಶಾಂತಿ, ಸುವ್ಯವಸ್ಥೆ ಕಾಪಾಡೋಕೆ ರೈತರು ಹಾಗೂ ಮುಖಂಡರು ಸಹಕಾರ ಕೊಡ್ಬೇಕು ಅಂತ ಕೇಳಿಕೊಂಡಿದ್ದಾರೆ.
-masthmagaa.com
Contact Us for Advertisement