masthmagaa.com:
ಐಪಿಎಲ್ನಲ್ಲಿ ನನಗೆ ಸಿಗಬೇಕಾದ ಗೌರವ ಸಿಗಲಿಲ್ಲ ಅದಕ್ಕೆ ನಾನು ಐಪಿಎಲ್ ಹರಾಜಿನಿಂದ ಹೊರಗೆ ಉಳಿದೆ ಅಂತ ಯೂನಿವರ್ಸಲ್ ಬಾಸ್, ಟಿ-20 ದಿಗ್ಗಜ ಕ್ರಿಸ್ ಗೇಲ್ ಹೇಳಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ನನ್ನನ್ನ ಸರಿಯಾಗಿ ನಡೆಸಿಕೊಂಡಿರಲಿಲ್ಲ, ನನಗೆ ಸಿಗಬೇಕಾದ ಗೌರವ ಸಿಗಲಿಲ್ಲ. ಅದಕ್ಕೆ ನಾನು ಈ ವರ್ಷದ ಐಪಿಎಲ್ ಹರಾಜಿನಿಂದ ಆಚೆ ಉಳಿದೆ ಅಂತ ಇಂಗ್ಲೆಂಡ್ ಮಿರರ್ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ಜೊತೆಗೆ ನಾನು ಕಲ್ಕತ್ತಾ, ಆರ್ಸಿಬಿ ಮತ್ತು ಪಂಜಾಬ್ ತಂಡಗಳಿಗೆ ಆಡಿದೆ. ಆದ್ರೆ ಆರ್ಸಿಬಿ ಮತ್ತು ಪಂಜಾಬ್ಗೆ ಕಪ್ ಗೆಲ್ಲಿಸಿ ಕೊಡೋ ಆಸೆ ಇತ್ತು ಅಂತ ಹೇಳಿದ್ದಾರೆ.
-masthmagaa.com
Contact Us for Advertisement